ಕರ್ನಾಟಕ

ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ

Pinterest LinkedIn Tumblr

knife-murderaaaaaaaaaಬೆಂಗಳೂರು,ಜೂ.೬- ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನನ್ನು ಅಡ್ಡಗಟ್ಟಿ ಹಾಡಹಗಲೇ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ದಟನೆ ನೆಲಮಂಗಲ ಸಮೀಪದ ಬೊಮ್ಮಶಟ್ಟಿಹಳ್ಳಿ ಬಳಿ ನಡೆದಿದೆ.
ಅಜರ್‌ಬೆಟ್ಟಹಳ್ಳಿಯ ನಿವಾಸಿ ಲಕ್ಷ್ಮಿಕಾಂತ್(೨೧) ಕೊಲೆಯಾದ ಯುವಕನಾಗಿದ್ದಾನೆ, ಬಿಕಾಂ ಮುಗಿಸಿ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀಕಾಂತ್ ಮತ್ತೊಂದು ಕಂಪನಿಯಲ್ಲಿ ಕೆಲಸಕ್ಕೆ ವಿದ್ಯಾರ್ಹತೆಯ ದಾಖಲಾತಿ(ರೆಜ್ಯೂಮ್)ಕೊಡಲು ಮಾಕಳಿಗೆ ನಿನ್ನೆ ಮಧ್ಯಾಹ್ನ ಬರುತ್ತಿರುವಾಗ ಈ ಕೃತ್ಯ ನಡೆದಿದೆ.
ಅಪರಿಚಿತ ವ್ಯಕ್ತಿಗಳ ತಂಡ ಯುವಕ ಲಕ್ಷ್ಮಿಕಾಂತ್ ದೇಹದ ಮೇಲೆ ಮೂರ್ನಾಲ್ಕು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದೆ.
ಕೊಲೆಗೆ ಕಾರಣಗಳು ತಿಳಿದುಬಂದಿಲ್ಲ.ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.

Comments are closed.