ಕರ್ನಾಟಕ

ಸ್ನೇಹಿತನಿಗೆ ಇರಿದು ಪರಾರಿ

Pinterest LinkedIn Tumblr

knife-murderaaaaaaaaaಬೆಂಗಳೂರು,ಮೇ.28=ಹಳೆಯ ದ್ವೇಷದ ಹಿನ್ನಲೆಯಲ್ಲಿ ಯುವಕನ ಹೊಟ್ಟೆಗೆ ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಪರಾರಿಯಾಗಿರುವ ದುರ್ಘಟನೆ ಹೆಚ್‍ಎಸ್‍ಆರ್ ಲೇಔಟ್‍ನ ಅಗರದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ಗಾಯಗೊಂಡಿರುವ ರಂಜೀಶ್(30)ಅವರು ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ನೇಹಿತರಾದ ರಂಜೀಶ್ ಹಾಗೂ ಪ್ರಶಾಂತ್(32)ಅವರುಗಳು ಅಗರದ 24ನೇ ಮೇಯಿನ್‍ನ ಬಾರೊಂದರಲ್ಲಿ ರಾತ್ರಿ ಮದ್ಯಪಾನ ಮಾಡಿ ಜಗಳ ಮಾಡಿಕೊಂಡಿದ್ದಾರೆ.ಬಾರ್‍ನಲ್ಲಿದ್ದವರು ಇಬ್ಬರಿಗೂ ಬುದ್ಧಿ ಹೇಳಿ ಸುಮ್ಮನಿರಿಸಿದ್ದಾರೆ.

ನಂತರ ಅಲ್ಲಿಂದ ಮನೆಗೆ ಹೋಗುವ ವೇಳೆ ಆಕ್ರೋಶಗೊಂಡಿದ್ದ ಪ್ರಶಾಂತ್ ಸ್ನೇಹಿತ ರಂಜೀಶ್ ಅವರ ಹೊಟ್ಟಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಹೆಚ್‍ಎಸ್‍ಆರ್ ಲೇಔಟ್ ಪೊಲೀಸರು ಆರೋಪಿ ಪ್ರಶಾಂತ್‍ಗಾಗಿ ತೀವ್ರ ಶೋಧ ನಡೆಸಿದ್ಧಾರೆ.

ಯುವಕನ ಮೇಲೆ ಹಲ್ಲೆ

ಕೆಪಿ ಅಗ್ರಹಾರದ ಮಾಗಡಿ ರಸ್ತೆಯ 7ನೇ ಕ್ರಾಸ್ ಬಳಿ ನಿನ್ನೆ ರಾತ್ರಿ ನಾಲ್ವರು ಸ್ನೇಹಿತರು ಕ್ಷುಲಕ ಕಾರಣಕ್ಕೆ ಜಗಳ ಮಾಡಿಕೊಂಡು ಓರ್ವನ ಬಳಿಯಿದ್ದ 20 ಸಾವಿರ ನಗದನ್ನು ಮತ್ತೊಬ್ಬ ಕಸಿದು ಪರಾರಿಯಾಗಿದ್ದಾನೆ.

ಮಾಗಡಿ ರಸ್ತೆಯ 7ನೇ ಕ್ರಾಸ್ ಬಳಿ ನಿನ್ನೆ ರಾತ್ರಿ 10.30ರ ವೇಳೆ ಬಾಪುಸಿಂಗ್,ರಾಜೇಶ್,ಭಾಟಿಯಾ ಹಾಗೂ ಮಣಿ ಅವರುಗಳು ಕ್ಷುಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ.ಜಗಳ ವಿಕೋಪಕ್ಕೆ ತಿರುಗಿದಾಗ ಬಾಪುಸಿಂಗ್ ಅವರ ಮೇಲೆ ಹಲ್ಲೆ ಮಾಡಿದ ರಾಜೇಶ್ ಅವರ ಬಳಿಯಿದ್ದ 20 ಸಾವಿರ ಹಣವನ್ನು ಕಸಿದು ಪರಾರಿಯಾಗಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಕೆಪಿ ಅಗ್ರಹಾರ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.

Comments are closed.