ಬೆಂಗಳೂರು: ಲೋಕಾಯುಕ್ತರ ಹುದ್ದೆಗೆ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರನ್ನು ನೇಮಿಸುವಂತೆ ಸರ್ಕಾರ ಮಾಡಿದ್ದ ಶಿಫಾರಸನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ತಿರಸ್ಕರಿಸಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
ಅವರ ನೇಮಕಕ್ಕೆ ಸರ್ಕಾರ ನೀಡಿದ್ದ ಸಮರ್ಥನೆ ತೃಪ್ತಿ ತಂದಿಲ್ಲ ಎಂದು ವಾಲಾ ಅವರು ಹೇಳಿದ್ದಾರೆ ಎಂದು ಗೊತ್ತಾಗಿದೆ.
ಇದರಿಂದ ಲೋಕಾಯುಕ್ತ ನೇಮಕದ ವಿಚಾರ ಮತ್ತಷ್ಟು ನೆನೆಗುದಿಗೆ ಬಿದ್ದಂತಾಗಿದೆ.