ಕಲಬುರಗಿ: ಕಲಬುರಗಿ-ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ನಗರಕ್ಕೆ ಆಗಮಿಸಿ ಜಿಲ್ಲಾಸ್ಪತ್ರೆ ಸೇರಿದಂತೆ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿರುವ ಉಳಿದ ಆಸ್ಪತ್ರೆಗಳಿಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆ ಭೇಟಿ ನಂತರ, ಮಧ್ಯರಾತ್ರಿಯಲ್ಲಿಯೇ ಅಧಿಕಾರಿಗಳ ತುರ್ತು ಸಭೆ ನಡೆಸಿದ ಖಾದರ್, ಘಟನೆ ಯಾರ ನಿರ್ಲಕ್ಷ್ಯದಿಂದ ನಡೆದಿದೆ ಎಂಬುದರ ವರದಿ ನೀಡುವಂತೆ ಸಭೆಯಲ್ಲಿ ಡಿಸಿ ವಿಪುಲ್ ಬನ್ಸಾಲ್ಗೆ ಸೂಚನೆ ನೀಡಿದರು.
ಅವಘಡಕ್ಕೆ ತುತ್ತಾದ ನವಜಾತ ಶಿಶು ವಿಭಾಗ(ಎಸ್.ಎನ್.ಸಿ.ಯು) ದುರಸ್ತಿಗೊಳಿಸಿ ಮರು ಆರಂಭಿಸುವಂತೆ ಸೂಚಿಸಿದ ಅವರು, ಸಮಯಪ್ರಜ್ಞೆ ಮೆರೆದು ಮಕ್ಕಳನ್ನು ರಕ್ಷಿಸಿದ ಫಕೀರಪ್ಪ ಮತ್ತು ನರ್ಸ್ಗಳ ತಂಡಕ್ಕೆ ಆರೋಗ್ಯ ಇಲಾಖೆಯಿಂದ ಗೌರವಿಸುವುದಾಗಿ ಪ್ರಕಟಿಸಿದರು.