ಕರ್ನಾಟಕ

ಕಾಫಿ ತೊಟಕ್ಕೆ ಅಕಸ್ಮಿಕವಾಗಿ ಬೆಂಕಿ:1 ಲಕ್ಷಕ್ಕೂ ಅಧಿಕ ನಷ್ಟ

Pinterest LinkedIn Tumblr

coffeeಬೇಲೂರು, ಮಾ.14-  ಕಾಫಿ ತೋಟಕ್ಕೆ ಅಕಸ್ಮಿಕವಾಗಿ ಬೆಂಕಿ ಬಿದ್ದಿರುವುದರಿಂದ 1 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿರುವ ಘಟನೆ ಪಟ್ಟಣ ಸಮೀಪದ ಚನ್ನಪುರ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಸನ್ಯಾಸಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಪುರ ಗ್ರಾಮದ ಭದ್ರೇಗೌಡ ಎಂಬುವವರಿಗೆ ಸೇರಿದ ಸರ್ವೆ.ನಂ 8 ರ ಲ್ಲಿ ಬೆಳೆದಿದ್ದ ಕಾಫಿ ತೋಟದ ಜಮೀನಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಜಮೀನಿನ ಕಾಫಿ ತೋಟದಲ್ಲಿ ಬೆಳೆದಿದ್ದ ಬಾಳೆ, ಸಿಲ್ವರ್ ಮರಗಳು, 600ಕ್ಕೂ ಹೆಚ್ಚು ಕಾಫಿ ಗಿಡಗಳು ಹಾಗೂ 200ಕ್ಕೂ ಹೆಚ್ಚು ಮೇಣಸಿನ ಬಳ್ಳಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

ತೋಟದ ಮಾಲೀಕರಿಗೆ 1 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದ್ದು, ಬೆಂಕಿ ಯಾವರೀತಿ ಬಿದ್ದಿದೆ ಎಂದು ತಿಳಿಯದಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಮಾಲೀಕ ಭದ್ರೇಗೌಡ ತಮ್ಮ ಅಳಲು ತೋಡಿಕೊಂಡರು.

Write A Comment