ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರದ ಜೈಲು ಸೇರಿರುವ ನಟ ಹುಚ್ಚ ವೆಂಕಟ್, ತನ್ನನ್ನು ನೋಡಲು ಬಂದ ಕೈದಿಗಳಿಗೆ, ‘ನಿಮಗಾಗಿಯೇ ಒಂದು ಸಿನಿಮಾ ಮಾಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ.
ಜೈಲಿನ ಆಕರ್ಷಕ ಬಿಂದುವಾಗಿರುವ ವೆಂಕಟ್ ಅವರನ್ನು ನೋಡಲು ಶನಿವಾರವೂ ಕೈದಿಗಳು ಮುಗಿ ಬೀಳುತ್ತಿದ್ದರು. ಬೆಳಗ್ಗೆ ಎದ್ದು ತನ್ನ ಕೋಣೆ ಬಳಿ ಕುಳಿತಿದ್ದ ಅವರಿಗೆ ಉಪಾಹಾರವನ್ನು ತಂದುಕೊಟ್ಟು ಕೆಲ ಕೈದಿಗಳು ಸಾಂತ್ವನ ಹೇಳಿದರು. ಈ ವೇಳೆ ವೆಂಕಟ್, ‘ನಿಮ್ಮನ್ನೆಲ್ಲ ನೋಡಿದರೆ ನನಗೆ ಬೇಜಾರಾಗುತ್ತೆ ಕಣ್ರೊ. ಮುಂದೆ ನಿಮಗಾಗಿಯೇ ಒಂದ್ ಸಿನಿಮಾ ಮಾಡ್ತಿನಿ’ ಎಂದು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ವಿಚಾರಣೆ 23ಕ್ಕೆ: ವೆಂಕಟ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು, ಕೋರ್ಟ್ ನವೆಂಬರ್ 23ಕ್ಕೆ ಮುಂದೂಡಿದೆ.