ಕರ್ನಾಟಕ

ರಮ್ಯ ಜಾಗಕ್ಕೆ ಹರಿಪ್ರಿಯ; ಮತ್ತೆ ಹೆಂಚಿನ ಮೇಲೆ ನೀರ್ ದೋಸೆ

Pinterest LinkedIn Tumblr

haripriyaಬೆಂಗಳೂರು: ಕೆಲವು ವಿವಾದಗಳಿಗೆ ಕೊನೆಯೇ ಇರುವುದಿಲ್ಲ. ಅಂತಹ ಒಂದು ಯೋಜನೆ ನೀರ್ ದೋಸೆ. ಈಗಾಗಲೇ ಹಲವಾರು ಬಾರಿ ನಿರ್ಮಾಪಕರು ಕೈಚೆಲ್ಲಿ ತಡವಾಗಿದ್ದ ಯೋಜನೆ ಮತ್ತೆ ಪ್ರಾರಂಭವಾಗುವ ಶುಭ ಸೂಚನೆ ದೊರೆತಿದೆ. ಈ ಯೋಜನೆಯನ್ನು ನಟಿ ರಮ್ಯ ತೊರೆದಿದ್ದರಿಂದ ಸಿನೆಮಾಗೆ ಎಳ್ಳು ನೀರು ಬಿಡಲಾಗಿದೆ ಎನ್ನಲಾಗಿತ್ತು. ಆದರೆ ಈಗ ರಮ್ಯ ಅವರ ಜಾಗಕ್ಕೆ ಹರಿಪ್ರಿಯ ಅವರು ಬಂದಿದ್ದಾರೆ ಎನ್ನಲಾಗಿದ್ದು, ಸಿದ್ಲಿಂಗು ಖ್ಯಾತಿಯ ವಿಜಯ್ ಪ್ರಸಾದ್ ಸಿನೆಮಾ ಮುಂದುವರೆಸುವ ಸೂಚನೆ ನೀಡಿದ್ದಾರೆ.

ಸ್ಕಂದ ಎಂಟರ್ಟೈನ್ಮೆಂಟ್ ಪ್ರೈ ಲಿ ಈ ಯೋಜನೆಯನ್ನು ಅಧಿಕೃತವಾಗಿ ಮುಂದುವರಿಸಲಿದೆ. ನಟ ಜಗ್ಗೇಶ್ ಮತ್ತು ದತ್ತಣ್ಣ ಸಮ್ಮುಖದಲ್ಲಿ ಮತ್ತೆ ಪೂಜೆಯನ್ನು ನೆರವೇರಿಸಲಾಗಿದ್ದು ಚಿತ್ರೀಕರಣ ಸೆಪ್ಟಂಬರ್ ೯ ಅಥವಾ ೧೦ ರಂದು ಪ್ರಾರಂಭವಾಗಲಿದೆ.

ಒಂದು ವಾರದವೆರೆಗೆ ಮೊದಲ ಹಂತದ ಚಿತ್ರೀಕರಣ ನಡೆಯಲಿದ್ದು, ಅಕ್ಟೋಬರ್ ನಲ್ಲಿ ಉಳಿದ ಭಾಗದ ಚಿತ್ರೀಕರಣ ನಡೆಯಲಿದೆ. ರಮ್ಯ ಜೊತೆ ಸುಮಾರು ೪೦% ಚಿತ್ರೀಕರಣ ಈಗಾಗಲೇ ಮುಗಿದಿತ್ತು, ಆದರೆ ಅದನ್ನು ಈಗ ಕೈಬಿಟ್ಟು ಅದನ್ನೆಲ್ಲಾ ಮರುಚಿತ್ರೀಕರಣ ಮಾಡಬೇಕಿದೆ.

ಬಲ್ಲ ಮೂಲಗಳ ಪ್ರಕಾರ ನೀರ್ ದೋಸೆಯಲ್ಲಿ ಹರಿಪ್ರಿಯ ಲೈಂಗಿಕ ಕಾರ್ಯಕರ್ತೆಯ ಪಾತ್ರ ನಿರ್ವಹಿಸಲಿದ್ದು, ಸುಮನ್ ರಂಗನಾಥ್, ದತ್ತಣ್ಣ ಮತ್ತು ಜಗ್ಗೇಶ್ ಮುಖ್ಯ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

Write A Comment