ಕರ್ನಾಟಕ

‘ಪಂಪ’ ಪ್ರಶಸ್ತಿ ಹಿಂದಿರುಗಿಸಿದ ಚಂಪಾ

Pinterest LinkedIn Tumblr

champaಬೆಂಗಳೂರು: ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಖಂಡಿಸಿ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರು 2009ನೇ ಸಾಲಿನ ಪಂಪ ಪ್ರಶಸ್ತಿಯನ್ನು ಸರ್ಕಾರಕ್ಕೆ ಸೋಮವಾರ ಹಿಂದಿರುಗಿಸಿದರು.

‘ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ’ ಎಂಬ ಪತ್ರವನ್ನು ಚಂಪಾ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ ಅವರಿಗೆ ಸಲ್ಲಿಸಿದರು. ಪತ್ರದ ಜೊತೆ ಪ್ರಶಸ್ತಿಯ ಮೊತ್ತವಾದ ₹3 ಲಕ್ಷದ ಚೆಕ್‌ ಇತ್ತು.

ಡಾ. ಕಲಬುರ್ಗಿ ಮತ್ತು ಪತ್ರಕರ್ತ ಲಿಂಗಣ್ಣ ಸತ್ಯಂಪೇಟೆ ಹಂತಕರ ಪತ್ತೆಗೆ ತನಿಖಾಧಿಕಾರಿಗಳು ವಿಫಲರಾಗಿದ್ದಾರೆ, ಮೂಢನಂಬಿಕೆ ನಿಷೇಧ ಕಾನೂನನ್ನು ಸರ್ಕಾರ ಜಾರಿಗೊಳಿಸಿಲ್ಲ ಎಂಬ ಕಾರಣಕ್ಕೆ ಚಂಪಾ ಅವರು ಪ್ರಶಸ್ತಿ ಹಿಂದಿರುಗಿಸಿದ್ದಾರೆ.

Write A Comment