ಕರ್ನಾಟಕ

ಚಿಕ್ಕಮಗಳೂರು ಶಾಲೆಗೆ ನುಗ್ಗಿದ ಚಿರತೆ

Pinterest LinkedIn Tumblr

attack

ಚಿಕ್ಕಮಗಳೂರು: ನಗರದ ಹೃದಯ ಭಾಗದಲ್ಲಿರುವ ಟೌನ್ ಮಹಿಳಾ ಸಮಾಜ ಶೈಕ್ಷಣಿಕ ಸಂಸ್ಥೆಯ ಆವರಣದೊಳಗೆ ಚಿರತೆ ದಾಳಿ ಮಾಡಿದೆ. ಬಳಿಕ ಶಾಲೆಯ ಆವರಣಕ್ಕೆ ಹೊಂದಿಕೊಂಡಂತಿರುವ ಜೆರಾಕ್ಸ್ ಅಂಗಡಿಯೊಳಗೆ ನುಗ್ಗಿದ್ದು, ಸದ್ಯ ಅದನ್ನು ಅಲ್ಲಿಯೇ ಕೂಡಿ ಹಾಕಲಾಗಿದೆ. ಅದನ್ನು ನೋಡಲೆಂದು ಕಿಟಕಿಯ ಬಳಿ ಹೋಗಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಕಾರು ಚಾಲಕ ಗಣೇಶ್ ಸೇರಿದಂತೆ ಒಟ್ಟು 3 ಜನರ ಮೇಲೆ ಚಿರತೆ ದಾಳಿ ಮಾಡಿ, ಗಾಯಗೊಳಿಸಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳ ಮಾಹಿತಿಯ ಪ್ರಕಾರ ಚಿರತೆಯು ನಗರಸಭೆ ಆವರಣದಿಂದ ಶಾಲಾ ಆವರಣಕ್ಕೆ ಬಂದಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಸದಾ ಜನರಿಂದ ತುಂಬಿರುವ ಈ ಪ್ರದೇಶಕ್ಕೆ ಚಿರತೆ ಎಲ್ಲಿಂದ, ಹೇಗೆ ಬಂದಿತೆಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಚಿರತೆಯನ್ನು ಹಿಡಿಯುವ ಸಲುವಾಗಿ ಬೆಂಗಳೂರಿನಿಂದ ಅರವಳಿಕೆ ತಜ್ಞರ ತಂಡವನ್ನು ಕರೆಸಲಾಗುತ್ತಿದೆ. ಆ ತಂಡ ಬಂದ ನಂತರದಲ್ಲಿ ಚಿರತೆಯನ್ನು ಹಿಡಿದು, ಅರಣ್ಯದಲ್ಲಿ ಬಿಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

Write A Comment