ಕೋಲಾರ, ಜೂ.19: ಯೋಗ ಆರೋಗ್ಯಕ್ಕೆ ಸಂಬಂಧಿಸಿದ್ದು, ಯೋಗ ದಿನ ಆಚರಿಸುವುದರಲ್ಲಿ ರಾಜಕೀಯ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತದ ಯೋಗಕ್ಕೆ ವಿಶ್ವವೇ ಮಾನ್ಯತೆ ನೀಡಿದೆ. ರಾಜ್ಯದಲ್ಲಿ ನಾವು ಅದನ್ನು ಗೌರವಿಸಲೇಬೇಕೆಂದು ಹೇಳಿದರು.
ಯೋಗದಿನ ಆಚರಿಸುವುದರಲ್ಲಿ ಯಾವ ಪಕ್ಷಕ್ಕೂ ವೋಟ್ಬ್ಯಾಂಕ್ ಸೃಷ್ಟಿಯಾಗುವುದಿಲ್ಲ. ಸಚಿವ ಆಂಜನೇಯ ಅವರ ಮಾತು ಹೆಚ್ಚು ಕಡಿಮೆಯಾಗಿದೆ. ಅದನ್ನು ದೊಡ್ಡದು ಮಾಡುವುದು ಸರಿಯಲ್ಲ ಎಂದು ಹೇಳಿದರು. ಆರೋಗ್ಯ ಇಲಾಖೆಯಲ್ಲಿ ಕೊರತೆ ಇರುವ ಆರು ಸಾವಿರ ವೈದ್ಯರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯಗೊಳಿಸುವ ಸಂಬಂಧ ವೈದ್ಯಕೀಯ ಶಿಕ್ಷಣ ನೀತಿಯೊಂದನ್ನು ರೂಪಿಸಲಾಗುತ್ತಿದೆ ಎಂದು ಖಾದರ್ ಹೇಳಿದರು. ಜಿಲ್ಲಾಧಿಕಾರಿ ತ್ರಿಲೋಕ್ಚಂದ್ರ, ಎಂಎಸ್ಐಎಲ್ ಅಧ್ಯಕ್ಷ ಅನಿಲ್ಕುಮಾರ್ ಮೊದಲಾದವರು ಇದ್ದರು.