ಕರ್ನಾಟಕ

ಡಿ.ಕೆ.ರವಿ ಸಾವಿನ ನೋವು; ಕುಟುಂಬದವರಿಂದ ಮತದಾನ ಬಹಿಷ್ಕಾರ

Pinterest LinkedIn Tumblr

D.K.Ravi-Family

ಕುಣಿಗಲ್,ಜೂ.2: ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಕುಟುಂಬದವರು ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದ್ದಾರೆ. ನನ್ನ ಸಹೋದರನ ಸಾವಿನಿಂದ ನಮಗೆ ತುಂಬ ನೋವಾಗಿದೆ. ಸರ್ಕಾರದಿಂದ ಯಾವುದೇ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಗ್ರಾಮ ಪಂಚಾಯ್ತಿಯಲ್ಲಿ ಮತದಾನ ಮಾಡುವುದಿಲ್ಲ ಎಂದು ಡಿ.ಕೆ.ರವಿ ಸಹೋದರ ರಮೇಶ್ ತಿಳಿಸಿದ್ದಾರೆ.

ಕೊಡವತ್ತಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ದೊಡ್ಡಕೊಪ್ಪಲು ಗ್ರಾಮದಲ್ಲಿ ಇಂದು ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಮತದಾನ ಮಾಡಬೇಕಿತ್ತು. ನಮ್ಮ ಮನೆಯಲ್ಲಿ ಐದು ಮತಗಳಿವೆ. ಆದರೆ ಯಾವುದೂ ಬೇಡವಾಗಿದೆ. ನಮ್ಮ ಸಹೋದರನ ಸಾವು ಸಾಕಷ್ಟು ದುಃಖ ತಂದಿದೆ. ಸರ್ಕಾರದಿಂದ ಯಾವ ನ್ಯಾಯವೂ ಸಿಗಲಿಲ್ಲ.ನ್ಯಾಯ ಸಿಗುವವರೆಗೂ ನಾವು ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮತದಾನ ಬಹಿಷ್ಕರಿಸಿದ್ದಾರೆ.

ಗ್ರಾಮಪಂಚಾಯ್ತಿಯಲ್ಲಿ ಚುನಾವಣಾ ಕಣದಲ್ಲಿದ್ದ ಕೆಲವು ಅಭ್ಯರ್ಥಿಗಳು ನಮ್ಮ ಮನೆಗೆ ಬಂದು ಮತ ಹಾಕುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ನಾವ್ಯಾರು ಮತ ಹಾಕುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

Write A Comment