ದಾವಣಗೆರೆ, ಮೇ 28: ಬಿಜೆಪಿ ಅಬಕಾರಿ ಖಾತೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಕುಂದೂರು ಪಟ್ಟಣದಲ್ಲಿರುವ ನಿವಾಸ, ಕಚೇರಿ, ಔಟ್ ಹೌಸ್, ಹಾಸ್ಟೇಲ್ ಮತ್ತು ವಿದ್ಯಾಸಂಸ್ಥೆ ಮೇಲೆ ಲೋಕಾಯುಕ್ತ ಎಸ್ಪಿ ಶ್ರೀಧರ್ ನೇತೃತ್ವದಲ್ಲಿ ಗುರುವಾರ ಬೆಳಂಬೆಳಗ್ಗೆ ದಾಳಿ ನಡೆದಿದೆ.
ಬೆಂಗಳೂರಿನ ಬಿಇಎಲ್ ರಸ್ತೆಯ ಆರ್.ಕೆ. ಗಾರ್ಡನ್ ಬಳಿ ನಿವಾಸ ಹಾಗೂ ರೇಣುಕಾಚಾರ್ಯ ಕುಟುಂಬದ ಒಡೆತನದ ವಿದ್ಯಾಸಂಸ್ಥೆಯಾದ ಶಿವಮೊಗ್ಗ ತಾಲೂಕಿನ ಬಾಪೂಜಿ ವಿದ್ಯಾಸಂಸ್ಥೆ ಮೇಲೂ ಲೋಕಾ ಡಿವೈಎಸ್ಪಿ ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಮಾಜಿ ಸಚಿವರ ವಿರುದ್ಧ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷ ಗುರುಪಾದಯ್ಯ ಮಠದ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದಾವಣಗೆರೆ ಲೋಕಾಯುಕ್ತ ಕೋರ್ಟ್ ತನಿಖೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆದಿದೆ.