ಕರ್ನಾಟಕ

ಅಲೋಕ್‌ ಕುಮಾರ್ ಅಮಾನತು : ಎಣ್ಣೆ ಪಾರ್ಟಿ ಮಾಡಿ ಕುಡಿದು-ಕುಣಿದು ಕುಪ್ಪಳಿಸಿ ಖುಷಿ ಪಟ್ಟ ರೌಡಿಗಳು

Pinterest LinkedIn Tumblr

dan

ಬೆಂಗಳೂರು, ಮೇ 25: ರೌಡಿಗಳಿಗೆ ಸಿಂಹಸ್ವಪ್ನವಾಗಿದ್ದ ಟಫ್‌ಕಾಫ್, ಸೂಪರ್ ಕಾಫ್ ಅಲೋಕ್‌ಕುಮಾರ್ ಒಂದಂಕಿ ಲಾಟರಿ ಹಗರಣದಲ್ಲಿ ಅಮಾನತಾಗುತ್ತಿದ್ದಂತೆ ನಿರಾಳವಾಗಿದ್ದ ರೌಡಿ ಪಡೆಗಳು ನಿನ್ನೆ ಭರ್ಜರಿ ಸಂತೋಷ ಕೂಟ ಆಯೋಜಿಸಿ ಕುಡಿದು-ಕುಣಿದು ಕುಪ್ಪಳಿಸಿರುವುದು ಬೆಳಕಿಗೆ ಬಂದಿದೆ. ನಗರದ ರೌಡಿಗಳಿಗೆ ಅಲೋಕ್‌ಕುಮಾರ್ ಸಿಂಹಸ್ವಪ್ನವಾಗಿದ್ದರು.

ಸೌತ್ ಡಿಸಿಪಿಯಾಗಿದ್ದಾಗ ರೌಡಿಗಳನ್ನು ಮಟ್ಟ ಹಾಕಿದ್ದರು. ಕ್ರೈಮ್ ಬ್ರಾಂಚ್ ಜಾಯಿಂಟ್ ಕಮಿಷನರ್ ಆಗಿದ್ದಾಗಲೂ ಕೂಡ ರೌಡಿಗಳ ಎಡೆಮುರಿ ಕಟ್ಟಿ ಹುಟ್ಟಡಗಿಸಿದ್ದರು. ಯಾವೊಬ್ಬ ರೌಡಿಯೂ ತಲೆ ಎತ್ತದಂತೆ, ಬಾಲ ಬಿಚ್ಚದಂತೆ ನೋಡಿಕೊಂಡಿದ್ದರು. ಅಂತಹ ಅಧಿಕಾರಿ ಈಗ ಅಕ್ರಮ ಲಾಟರಿ ದಂಧೆಯಲ್ಲಿ ಅಮಾನತುಗೊಂಡಿರುವುದು ಇವರಿಗೆಲ್ಲ ಹಾಲು ಕುಡಿದಷ್ಟು ಸಂತೋಷವಾಗಿದೆ. ನಗರದ ಕಾನೂನು-ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಕಮಿಷನರ್ ಆಯುಕ್ತಾಗಿದ್ದಾಗಲೂ ಕೂಡ ರೌಡಿಗಳ ನಿದ್ದೆ ಮಾಡಲು ಬಿಟ್ಟಿರಲಿಲ್ಲ. ಪ್ರತಿ ವಾರ ರೌಡಿಗಳ ಮನೆಗಳ ಮೇಲೆ ರೈಡ್ ಮಾಡಿ ಅವರನ್ನು ಎಳೆತಂದು ಪರೇಡ್ ಮಾಡಿಸುತ್ತಿದ್ದರು.

ರೌಡಿ ಶೀಟರ್‌ಗಳ ಅಟ್ಟಹಾಸವನ್ನು ಮೆಟ್ಟಿ ನಿಂತಿದ್ದ ಅಧಿಕಾರಿ ಮೀಟರ್ ಬಡ್ಡಿದಂಧೆ, ರಿಯಲ್ ಎಸ್ಟೇಟ್ ದಂಧೆ ಮುಂತಾದ ದಂಧೆ ನಡೆಸುವವರನ್ನು ಎಳೆತಂದು ಎಚ್ಚರಿಕೆ ನೀಡಿದ್ದರು. ಇಂತಹ ಅಧಿಕಾರಿ ಈಗ ಅಮಾನತುಗೊಂಡು ವಿಚಾರಣೆ ಎದುರಿಸುತ್ತಿದ್ದಾರೆ. ರೌಡಿ ಪಡೆಗಳಿಗೆ ಖುಷಿಯಾಗಿದೆ. ಈ ಖುಷಿಯನ್ನು ಅವರು ನಿನ್ನೆ ಪಾರ್ಟಿ ನಡೆಸುವ ಮೂಲಕ ಆಚರಿಸಿದ್ದಾರೆ ಎಂದು ತಿಳಿದುಬಂದಿದೆ. ಅಲೋಕ್‌ಕುಮಾರ್ ಕರ್ತವ್ಯದಲ್ಲಿದ್ದಿದ್ದರಿಂದ ನಾವ್ಯಾರೂ ನಮ್ಮ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿರಲಿಲ್ಲ. ಈಗ ಅವರು ಅಮಾನತುಗೊಂಡಿರುವುದು ಒಳ್ಳೆಯದಾಯಿತು ಎಂದು ಚಿಯರ್ಸ್್ ಹೇಳಿದ್ದಾರೆ ಎಂದು ಗೊತ್ತಾಗಿದೆ.

Write A Comment