ಕರ್ನಾಟಕ

ಅನೈತಿಕ ಸಂಬಂಧ ಹಿನ್ನೆಲೆ: ಬಾಗೇಪಲ್ಲಿಯಲ್ಲಿ ಜೋಡಿ ಕೊಲೆ

Pinterest LinkedIn Tumblr

9021crime_scene_murder_generic

ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಊದುವಾರಪಲ್ಲಿಯಲ್ಲಿ ನಡೆದಿದೆ.

ಊದುವಾರಪಲ್ಲಿಯಲ್ಲಿ ವಾಸಿಸುತ್ತಿದ್ದ 25 ವರ್ಷದ ಸುಕನ್ಯಾ ಹಾಗೂ ಆಂಧ್ರ ಪ್ರದೇಶ ಮೂಲದ 45 ವರ್ಷದ ವೆಂಕಟೇಶಪ್ಪ ಕೊಲೆಯಾದವರಾಗಿದ್ದು, ಅಪರಿಚಿತರು ಇಬ್ಬರ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಚೇಳೂರು ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಜೋಡಿ ಕೊಲೆಗೆ ಅನೈತಿಕ ಸಂಬಂಧವೇ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಜೋಡಿ ಕೊಲೆಯಿಂದಾಗಿ ಊದುವಾರಪಲ್ಲಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

Write A Comment