ಬೆಳಗಾವಿ: ಜಿಲ್ಲೆಯ ಗಡಿಯ ರಾಷ್ಟ್ರೀಯ ಹೆದ್ದಾರಿ 4ರ ಕೊಲ್ಲಾಪುರದಲ್ಲಿ ಬಸ್ಗಳ ನಡುವೆ ಗುರುವಾರ ಅಪಘಾತ ಸಂಭವಿಸಿದ್ದು ಧಾರವಾಡ ಮೂಲದ ಐವರು ಮೃತಪಟ್ಟಿದ್ದಾರೆ.
ಇಂದು ನಸುಕಿನ ಜಾವ 3.30ರ ಸುಮಾರಿನಲ್ಲಿ ಈ ಅಪಘಾತ ನಡೆದಿದ್ದು, ಧಾರವಾಡದಿಂದ ಪುಣೆಗೆ ಮದುವೆಗೆ ಹೊರಟಿದ್ದ ಮಿನಿ ಬಸ್ ರಸ್ತೆ ಬದಿ ನಿಲ್ಲಿಸಿತ್ತು. ಈ ವೇಳೆ ಮಿನಿ ಬಸ್ಗೆ ಹಿಂಬದಿಯಿಂದ ವಿಆರ್ಎಲ್ ಬಸ್ ಡಿಕ್ಕಿ ಹೊಡೆದಿದೆ.
ಈ ಘಟನೆಯ ಪರಿಣಾಮ ಮಿನಿ ಬಸ್ನಲ್ಲಿದ್ದ ಧಾರವಾಡ ಮೂಲದ 70 ವರ್ಷದ ವೃದ್ಧೆ ಆಶಾಭಿ ಹಂದೇರ್ಗಲ್, 15 ವರ್ಷದ ಶಾಹಿನ್ ಮಹಮ್ಮದ್ ಹಂದೇರ್ಗಲ್ ಹಾಗೂ 20 ವರ್ಷದ ಶಾಹಿದ ಹಂದೇರ್ಗಲ್ ಎಂಬುವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಸ್ಥಳೀಯ ಕೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.