ಕರ್ನಾಟಕ

ಬಸವನಬಾಗೇವಾಡಿ ಬಳಿ ಭೀಕರ ಅಪಘಾತ : 7 ಮಂದಿ ಸಾವು

Pinterest LinkedIn Tumblr

Accident

ವಿಜಯಾಪುರ, ಫೆ.24: ಟ್ರ್ಯಾಕ್ಟರ್‌ನಲ್ಲಿ ಹೋಗುತ್ತಿದ್ದವರಿಗೆ ಭಾರೀ ವಾಹನವೊಂದು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ -50ರ ಬಸವನಬಾಗೇವಾಡಿ ಬಳಿ ಸಂಭವಿಸಿದೆ. ಮೃತರೆಲ್ಲರೂ ಟ್ರ್ಯಾಕ್ಟರ್‌ನಲ್ಲಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರಲ್ಲಿ 6 ಮಂದಿ ಮಹಿಳೆಯರು ಹಾಗೂ ಟ್ರ್ಯಾಕ್ಟರ್ ಚಾಲಕ ಎಂದು ತಿಳಿದು ಬಂದಿದೆ. ಇವರೆಲ್ಲರೂ ಗೋಳಸಂಗಿ ಗ್ರಾಮದವರೆಂದು ತಿಳಿದು ಬಂದಿದೆ. ಪ್ರಥಮ ಮಾಹಿತಿಯ ಪ್ರಕಾರ ಮೃತರನ್ನು ಹುಸೇನಾಬಿ ಮತಾಂತರ (25), ಗೌರವ ಲಕ್ಷ್ಮಣ ತಳವಾರಿ (22), ಜಯಶ್ರೀ (23), ಸುನಂದ ಲಕ್ಷ್ಮಣ್, ಕಾವೇರಿ ಯಮನಪ್ಪ (14), ಅಶೋಕ್ ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ 11.45ರ ಸಮಯದಲ್ಲಿ ಗೋಳಸಂಗಿ ಗ್ರಾಮದ ಬಳಿ ಟ್ರ್ಯಾಕ್ಟರ್‌ನಲ್ಲಿ ಜೋಳ ಕಟಾವು ಮಾಡುವ ಯಂತ್ರವನ್ನು ಹಾಕಿಕೊಂಡು ಚಾಲಕ ಸೇರಿ 14 ಕಾರ್ಮಿಕರು ಹೋಗುತ್ತಿದ್ದಾಗ ಎದುರಿನಿಂದ ಬಂದ ಭಾರೀ ವಾಹನವೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಟ್ರ್ಯಾಕ್ಟರ್ ರಸ್ತೆ ಬದಿ ಉರುಳಿ ಬಿದ್ದು ಅದರಡಿ ಸಿಲುಕಿ ಸುಮಾರು 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು , ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಬಸವನಬಾಗೇವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment