ಕರ್ನಾಟಕ

ನೀರು ಕೇಳಿದ ಯುವತಿಗೆ ಮೂತ್ರ ಕೊಟ್ಟ ವಿಕೃತ; ವಿಷಯ ತಿಳಿದು ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು

Pinterest LinkedIn Tumblr

water

ದಾವಣಗೆರೆ: ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ತಾನು ಕೆಲಸ ಮಾಡುತ್ತಿದ್ದ ಕಛೇರಿಯ ಯುವತಿ ನೀರು ಕೊಡಲು ಕೇಳಿದರೆ ಬಾಟಲಿಯಲ್ಲಿ ಮೂತ್ರ ತುಂಬಿಸಿಕೊಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಸಂತೋಷ್ ಎಂಬಾತನೇ ಈ ಕೃತ್ಯ ಮಾಡಿರುವ ಯುವಕನಾಗಿದ್ದು, ವಿಷಯ ತಿಳಿದು ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು ಆತನನ್ನು ಆರ್ಎಂಸಿ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾರ್ವಜನಿಕರ ಹಲ್ಲೆಯಿಂದ ಗಾಯಗೊಂಡಿರುವ ಸಂತೋಷನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಅದೇ ಸಂಸ್ಥೆಯಲ್ಲಿ ರಿಸೆಪ್ಶನಿಷ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ ಹಿಂದಿನಿಂದಲೂ ಚುಡಾಯಿಸುತ್ತಿದ್ದನೆನ್ನಲಾಗಿದ್ದು, ಈ ಕುರಿತು ಯುವತಿ ಸಂಸ್ಥೆಯ ಮುಖ್ಯಸ್ಥರಿಗೆ ದೂರು ನೀಡಿದ್ದಳೆನ್ನಲಾಗಿದೆ.

ಬಿಎ ಓದಿದ್ದ ಸಂತೋಷ್, ಸಂಸ್ಥೆಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದು ಸಹಜವಾಗಿ ಯುವತಿ ಸಣ್ಣ ಪುಟ್ಟ ಕೆಲಸಗಳನ್ನು ಹೇಳುತ್ತಿದ್ದುದು ಈತನಿಗೆ ಸಹಿಸಿಕೊಳ್ಳಲಾಗುತ್ತಿರಲಿಲ್ಲವೆನ್ನಲಾಗಿದೆ. ತನ್ನ ವಿರುದ್ದ ದೂರು ನೀಡಿದ್ದರಿಂದಲೂ ಸಂತೋಷ ಒಳಗೊಳಗೆ ಕುದಿಯುತ್ತಿದ್ದು ಸೇಡು ತೀರಿಸಿಕೊಳ್ಳಲು ಸಮಯ ಹೊಂಚು ಹಾಕುತ್ತಿದ್ದನೆನ್ನಲಾಗಿದೆ.

ಶುಕ್ರವಾರದಂದು ಯುವತಿ ಕುಡಿಯಲು ನೀರು ತರುವ ಸಲುವಾಗಿ ಆತನ ಬಳಿ ಬಾಟಲ್ ಕೊಟ್ಟರೆ ಅವನು ಅದರಲ್ಲಿ ನೀರಿನೊಂದಿಗೆ ಮೂತ್ರ ಸೇರಿಸಿಕೊಂಡು ತಂದಿದ್ದನೆನ್ನಲಾಗಿದೆ. ಇದ್ಯಾವುದನ್ನು ಅರಿಯದ ಯುವತಿ ಬಾಟಲಿಯನ್ನು ಮನೆಗೆ ತೆಗೆದುಕೊಂಡು ಹೋದ ವೇಳೆ ಗಮನಿಸಿದರೆ ಮೂತ್ರದ ವಾಸನೆ ಬರುತ್ತಿದ್ದುದರಿಂದ ನೊಂದು ಆತನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.

Write A Comment