ಕರ್ನಾಟಕ

ಲಾಡ್ಜ್‌ನಲ್ಲಿ ಪ್ರೇಮಿಗಳ ಆತ್ಮಹತ್ಯೆ

Pinterest LinkedIn Tumblr

loverssuside

ಬೆಂಗಳೂರು: ಕಾಟನ್‌ಪೇಟೆಯ ಕೆ.ಕೆ ಲೇನ್‌ನಲ್ಲಿರುವ ಲಾಡ್ಜ್‌ವೊಂದರಲ್ಲಿ ತಂಗಿದ್ದ ಯುವಕ-ಯುವತಿ ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೇರಳದ ಪಾಲಕ್ಯಾಡ್ ಜಿಲ್ಲೆಯ ಜಿಜೇಶ್(25) ಮತ್ತು ಶಿನು(22) ಆತ್ಮಹತ್ಯೆಗೆ ಶರಣಾದವರು. ಸೋಮವಾರ ನಸುಕಿನ 4.30ರಲ್ಲಿ ರಾಧಾಕೃಷ್ಣ ಲಾಡ್ಜ್‌ಗೆ ಬಂದಿದ್ದ ಇವರು ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು.

ಬೆಳಗ್ಗೆ 10 ಗಂಟೆ ಸುಮಾರಿಗೆ ಲಾಡ್ಜ್‌ನ ಸಿಬ್ಬಂದಿ ತಿಂಡಿ ಆರ್ಡರ್ ತೆಗೆದುಕೊಳ್ಳಲು ಬಾಗಿಲು ಬಡಿದಾಗ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಫ್ರೇಶ ಆಗುತ್ತಿರಬಹುದು ಎಂದುಕೊಂಡು ಸುಮ್ಮನಾಗಿದ್ದರು.

ಆದರೆ, ಮಧ್ಯಾಹ್ನ 13 ಗಂಟೆಯಾದರೂ ಈ ಜೋಡಿ ಹೊರ ಬಾರದಿದ್ದಾಗ ಅನುಮಾನಗೊಂಡ ಲಾಡ್ಜ್ ಮ್ಯಾನೇಜರ್, ಕೊಠಡಿ ಪರಿಶೀಲಿಸಲು ಸಿಬ್ಬಂದಿಗೆ ಹೇಳಿದ್ದರು.

ಸಿಬ್ಬಂದಿ ಹಲವು ಬಾರಿ ಬಡಿದರೂ ಬಾಗಿಲು ತೆಗೆಯಲಿಲ್ಲ. ಹೀಗಾಗಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ.

ರೈಲ್ವೆ ನೇಮಕ ಪರೀಕ್ಷೆ ಬರೆಯಲು ನಗರಕ್ಕೆ ಬಂದಿದ್ದು ಮಧ್ಯಾಹ್ನದ ವೇಳೆಗೆ ಕೊಠಡಿ ಖಾಲಿ ಮಾಡುವುದಾಗಿ ಜಿಜೇಶ್ ಲಾಡ್ಜ್ ಮ್ಯಾನೇಜರ್‌ಗೆ ಹೇಳಿದ್ದರು. ಈ ಜೋಡಿ ನಾಪತ್ತೆಯಾಗಿರುವ ಬಗ್ಗೆ ಪಾಲಕ್ಯಾಡ್ ಠಾಣೆಯಲ್ಲಿ 3 ದಿನಗಳ ಹಿಂದೆಯೇ ಪ್ರಕರಣ ದಾಖಲಾಗಿದೆ. ಕೊಠಡಿಯಲ್ಲಿ ಯಾವುದೇ ಮರಣ ಪತ್ರವೂ ಲಭಿಸಿಲ್ಲ.

ಹೀಗಾಗಿ ಮೃತರ ಪೂರ್ವಾಪರ, ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಗೊತ್ತಾಗಿಲ್ಲ ಎಂದು ಪಶ್ಚಿಮ ವಿಭಾಗ ಡಿಸಿಪಿ ಲಾಬೂರಾಮ್ ತಿಳಿಸಿದ್ದಾರೆ. ಪಾಲಕರು ಪ್ರೀತಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ. ಕೇರಳದಿಂದ ಕುಟುಂಬ ಸದಸ್ಯರು ಬಂದ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Write A Comment