ಚನ್ನಪಟ್ಟಣ: ನಮ್ಮ ಕುಟುಂಬಕ್ಕೂ ರಾಜಕಾರಣಕ್ಕೂ ಆಗಿ ಬರದೆನ್ನುವ ಸತ್ಯ ಮೊದಲ ಅನುಭವದಲ್ಲೇ ಅರ್ಥವಾಗಿದೆ. ಎಂಥದೇ ಒತ್ತಡ ಬಂದರೂ ಮತ್ತೆ ರಾಜಕಾರಣದತ್ತ ತಲೆ ಹಾಕಲಾರೆ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ.
ತಾಲೂಕಿನ ಪುಟ್ಟೇಗೌಡನದೊಡ್ಡಿಯಲ್ಲಿ ಸೋಮವಾರ ಶ್ರೀ ರೇಣುಕಾ ಯಲ್ಲಮ್ಮ ದೇಗುಲ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಕುಟುಂಬದ ರಾಜಕಾರಣ ಪ್ರವೇಶ ಆಕಸ್ಮಿಕವಷ್ಟೇ. ಮುಂದೆಂದೂ ಚುನಾವಣೆಗೆ ಸ್ಪರ್ಧೆ ಇಲ್ಲ ಎಂದು ಘೋಷಿಸಿದರು.
ನನ್ನ ಮಡದಿ ರಾಜಕೀಯ ಕುಟುಂಬದಿಂದ ಬಂದವರು. ಚುನಾವಣೆಗೆ ಸ್ಪರ್ಧಿಸುವ ಅವರ ಹಕ್ಕನ್ನು ತಿರಸ್ಕರಿಸಬಾರದು ಎನ್ನುವ ಕಾರಣಕ್ಕೆಷ್ಟೇ ನಾನು ಒಪ್ಪಿಗೆ ನೀಡಿದ್ದೆ. ನನ್ನ ಜೀವನವಿಡೀ ಕಲಾವಿದನಾಗಿಯೇ ಮುಂದುವರಿಯುವೆ ಎಂದರು.