ಕರ್ನಾಟಕ

ಬೇಟೆಗಾರರಿಂದ ಗುಂಡು: ಅರಣ್ಯ ಸಿಬ್ಬಂದಿಗೆ ಗಾಯ

Pinterest LinkedIn Tumblr

pvec30rmgSiddaraju-nov

ಕನಕಪುರ/ರಾಮನಗರ: ಅರಣ್ಯ ಅಧಿ­ಕಾರಿ­ಗಳ ತಂಡಕ್ಕೆ ಸಿಕ್ಕಿಬಿದ್ದ ಬೇಟೆಗಾರರು ತಪ್ಪಿಸಿಕೊಳ್ಳಲು ಅರಣ್ಯಾಧಿಕಾರಿಗಳ ಮೇಲೆಯೇ ನಾಡ ಬಂದೂಕಿನಿಂದ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಚೀಲಂದ­ವಾಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ.

ಈ ಘಟನೆಯಲ್ಲಿ ಕಾವೇರಿ ವನ್ಯ ಜೀವಿ ವಲ­ಯದ ಅರಣ್ಯ ಕಾವಲುಗಾರ ಸಿದ್ದರಾಜು ನಾಯಕ್‌ (22) ಎಂಬು­ವ­ರಿಗೆ ಗಾಯವಾಗಿದೆ. ಅವರ ತೊಡೆ ಹಾಗೂ ದೇಹದ ಇತರ ಭಾಗಕ್ಕೆ ಗುಂಡು­ಗಳು ತಾಗಿದ್ದು, ಅವರನ್ನು ಬೆಂಗಳೂರಿನ ವಿಕ್ಟೋ­ರಿಯಾ ಅಸ್ಪತ್ರೆಗೆ ಸಾಗಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾ­ಗುತ್ತಿದೆ. ಸಿದ್ದರಾಜು ದೇಹದಿಂದ ಮೂರು ಗುಂಡುಗಳನ್ನು ಹೊರ­ತೆಗೆಯ­ಲಾ­ಗಿದ್ದು, ಪ್ರಾಣಾಪಾಯದಿಂದ ಪಾರಾ­ಗಿ­­ದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಾತ­ನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖ­ಲಾಗಿದ್ದು, ಪೊಲೀಸರು ಸ್ಥಳ ಪರೀಕ್ಷೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಘಟನೆಯ ವಿವರ: ಚೀಲಂದವಾಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ­­ಗಾರರ ತಂಡ ಕಾಡು ಪ್ರಾಣಿಗಳನ್ನು ಬೇಟೆ­ಯಾಡಲು ನಾಡ ಬಂದೂಕು­ಗ­ಳನ್ನು ಹಿಡಿದು ಸಂಚರಿಸುತ್ತಿದ್ದ ದೃಶ್ಯ­ಗ­ಳನ್ನು ಕಾವೇರಿ ವನ್ಯಜೀವಿ ವಲಯದಲ್ಲಿ ಅಳ­­ವಡಿಸಲಾಗಿರುವ ಕ್ಯಾಮೆರಾಗಳು ಸೆರೆ ಹಿಡಿದಿದ್ದವು. ಇದರ ಆಧಾರದ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಹೆಚ್ಚಿನ ಗಸ್ತು ಏರ್ಪಡಿಸಲಾಗಿತ್ತು.

ಹೀಗೆ ಗಸ್ತು ಸುತ್ತುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ರವಿ ನೇತೃತ್ವದ ತಂಡವು ಶನಿವಾರ ಮುಂಜಾನೆ 3.30­ರಿಂದ 4 ಗಂಟೆ ವೇಳೆಯಲ್ಲಿ ಬೇಟೆಗಾರರ ತಂಡ­ವನ್ನು ಗುರುತಿಸಿದೆ. ಈ ವೇಳೆ ಪೊದೆ­ಯಲ್ಲಿ ಅಡಗಿ ಕುಳಿತ ಅರಣ್ಯ ಸಿಬ್ಬಂದಿ­ಯೊ­ಬ್ಬರು ಒಬ್ಬ ಬೇಟೆಗಾರನನ್ನು ಸೆರೆ ಹಿಡಿದಿದ್ದಾರೆ. ಆ ಕೂಡಲೇ ಮತ್ತೊಬ್ಬ ಬೇಟೆ­ಗಾರ ನಾಡ ಬಂದೂಕಿನಿಂದ ಸಿಬ್ಬಂದಿ ಕಡೆಗೆ ಗುಂಡು ಹಾರಿಸಿದ್ದಾನೆ. ಅರಣ್ಯ ಸಿಬ್ಬಂದಿ ನೋವಿನಿಂದ ಚೀರಿ­ಕೊಂ­ಡಾಗ  ಸೆರೆ ಸಿಕ್ಕಿದ್ದ ಬೇಟೆಗಾರ ಸೇರಿದಂತೆ ಎಲ್ಲ ಬೇಟೆಗಾರರು ಅಲ್ಲಿಂದ ಪರಾರಿ­ಯಾ­ಗಿದ್ದಾರೆ. ಸ್ಥಳದಲ್ಲಿ ಎರಡು ನಾಡ ಬಂದೂಕು, ಒಂದು ಮೊಬೈಲ್‌ ಪತ್ತೆಯಾಗಿದೆ.

Write A Comment