ಕರ್ನಾಟಕ

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಎಚ್.ಸಿ.ಶಿವರಾಮು

Pinterest LinkedIn Tumblr

shivu

ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಎಚ್.ಸಿ. ಶಿವ­ರಾಮು, ಪ್ರಧಾನ ಕಾರ್ಯದರ್ಶಿಯಾಗಿ ಪುಟ್ಟೇಗೌಡ ಮತ್ತು ಖಜಾಂಚಿಯಾಗಿ ಪ್ರವೀಣ್‌ಗೌಡ ಆಯ್ಕೆಯಾಗಿದ್ದಾರೆ.

ಭಾನುವಾರ ಇಲ್ಲಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಚುನಾವ­ಣೆ­ಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಚ್.ಸಿ.ಶಿವರಾಮು ಅವರು 3371 ಮತಗಳನ್ನು ಪಡೆದು ಜಯ ಗಳಿಸಿದರು. ಸಮೀಪದ ಪ್ರತಿಸ್ಪರ್ಧಿ ಸದಾ­ಶಿವ ರೆಡ್ಡಿ 2741 ಮತ್ತು ಎ.ಪಿ.ರಂಗ­ನಾಥ್ 2013 ಮತಗಳನ್ನು ಪಡೆದರು.

ಮುಂದಿನ 3 ವರ್ಷಗಳ ಅವ­ಧಿಗೆ ಅಧ್ಯ­ಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಹಾಗೂ 29 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆಯವರೆಗೂ ಮತದಾನ ನಡೆಯಿತು. ಒಟ್ಟು 8600 ಮತಗಳ ಚಲಾವಣೆಯಾಯಿತು. ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್ ಹಾಗೂ ಮೆಯೊ ಹಾಲ್‌ನಲ್ಲಿ ಮತ ದಾರ ವಕೀಲರಿಗೆ ಪ್ರತ್ಯೇಕವಾಗಿ ನಾಲ್ಕು ಕೌಂಟರ್‌ಗಳನ್ನು ತೆರೆಯಲಾ­ಗಿತ್ತು. ವಿದ್ಯು ನ್ಮಾನ ಮತಯಂತ್ರ ಬಳಸಲಾಗಿತ್ತು.

Write A Comment