ಕರಾವಳಿ

ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರ ದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ.

Pinterest LinkedIn Tumblr

ಮಂಗಳೂರು:  ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ 14ನೆಯ ಪ್ರತಿಷ್ಠಾ ವರ್ಧಂತ್ಯುತ್ಸವವನ್ನು ದಿನಾಂಕ 18/2/2022 ರಂದು ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಆ ಪ್ರಯುಕ್ತ ಬೆಳಗ್ಗೆ 5 ಗಂಟೆಗೆ ಅಷ್ಟ ದ್ರವ್ಯ ಮಹಾಗಣಪತಿ ಹೋಮದ ಮೂಲಕ ಕಾರ್ಯಕ್ರಮ ಪ್ರಾರಂಭ ಗೊಂಡಿತು.ಅಮ್ಮನವರ ಸಂಕಲ್ಪದಂತೆ ಲೋಕ ಕಲ್ಯಾಣಾರ್ಥ ಪ್ರಾರ್ಥನೆ ಯೊಂದಿಗೆ ಉದಯಾಸ್ತಮಾನ ವಿಶೇಷ ಪೂಜೆ, ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಅರ್ಚನೆ ,ಬೆಳಗ್ಗೆ10.00 ಗಂಟೆಗೆ ಶ್ರೀ ಧನ್ವಂತರಿ ಹೋಮ, ಭಜನೆ ಮತ್ತು ಮಂತ್ರ ಪಠನ,

ಮಧ್ಯಾಹ್ನ12.00 ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರಿಂದ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತು ಅಮ್ಮನವರ ಬಳಿಬಂದ ಭಕ್ತರ ಸಂಕಷ್ಟಗಳ ಪರಿಹಾರಕ್ಕೆಂದೇ ವಿಶೇಷವಾಗಿ ಬ್ರಹ್ಮಸ್ಥಾನಗಳನ್ನು ನಿರ್ಮಾಣ ಮಾಡಲಾಗಿದೆ.

ನಾಲ್ಕು ದ್ವಾರಗಳ ಈ ದೇವಸ್ಥಾನವು ಮಹಾತ್ಮರ ಪ್ರಾಣ ಪ್ರತಿಷ್ಠೆಯಿಂದಾಗಿ ಶ್ರೇಷ್ಠವಾದ ಕ್ಷೇತ್ರವೆನಿಸಲ್ಪಟ್ಟಿದೆ ಎಂದರು. ಕುಜ ರಾಹು ಶನಿಗಳ ಸಂದರ್ಭದಲ್ಲಿ ದುಷ್ಪರಿಣಾಮಗಳು ಹೆಚ್ಚು ಶಕ್ತಿಯುತವಾಗಿರುತ್ತದೆ.ಅಂತಹ ಸಂದರ್ಭಗಳಲ್ಲಿ ಮನುಷ್ಯನಿಗೆ ಜೀವನ ನಡೆಸಲು ಕಷ್ಟವಾಗುವುದನ್ನು ಅಮ್ಮ ನೋಡಿದ್ದಾರೆ ಮತ್ತು ಆತನ ಯೋಚನೆ ಮಾಡುವ ಶಕ್ತಿ, ಕ್ರಿಯಾತ್ಮಕವಾದ ಬುದ್ಧಿ ಯಾವುದೂ ಪ್ರಯೋಜನಕ್ಕೆ ಬಾರದಿರುವ ಸ್ಥಿತಿಯನ್ನು ಕಂಡು ಅಮ್ಮನವರು ದೋಷನಿವಾರಣಾ ಪೂಜೆಯ ವಿಶೇಷ ಪದ್ಧತಿಗಳನ್ನು ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಪ್ರಾರಂಭಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಗಾಂಧಿನಗರ ಇಲ್ಲಿನ ಶತಮಾನೋತ್ಸವ ಪ್ರಯುಕ್ತ ಆ ಶಾಲೆಗೆ ಅಗತ್ಯವಾದ ರೂ 1 ಲಕ್ಷ ಮೌಲ್ಯದ ಬೆಂಚು ಮತ್ತು ಡೆಸ್ಕ್ ಗಳನ್ನು ಮಾತಾ ಅಮೃತಾನಂದಮಯಿ ಮಠದ ಕೊಡುಗೆಯಾಗಿ ನೀಡಲಾಯಿತು.

ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರು ಪೂಜೆ ಸಲ್ಲಿಸಿ ಗಾಂಧಿನಗರ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಯಶೋದಾರವರಿಗೆ ಹಸ್ತಾಂತರಿಸಿದರು.ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ಸುವರ್ಣ, ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಡಾ.ಜೀವರಾಜ್ ಸೊರಕೆ,ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ, ಶ್ರೀ ಪ್ರಸಾದ್‌ ರಾಜ್ ಕಾಂಚನ್, ಶ್ರೀ ಪಂಕಜ್ ವಸಾನಿ, ಶ್ರೀ ಸುರೇಶ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

ಸಂಜೆ ಮಹಾ ಸುದರ್ಶನ ಹೋಮ,ಕಲಶ ಪೂಜೆ,ಪಂಚಗವ್ಯ ನವಕಮ್ ( ಬ್ರಹ್ಮ ಕಲಶ) ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಶ್ರೀಮತಿ ಸುಮಂಗಲಾರಾವ್ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದರು.

ದಕ್ಷಿಣ ಕನ್ನಡ, ಉಡುಪಿ,ಬೆಂಗಳೂರುಗಳಿಂದ ಆಗಮಿಸಿದ ನೂರಾರು ಭಕ್ತರು ಭಾಗವಹಿಸಿ ಕಲಶ ಸಮರ್ಪಣೆ ಮಾಡಿದರು. ಆನಂತರಮಹಾ ಅಭಿಷೇಕ , ಆರತಿ ಮತ್ತು ಪ್ರಸಾದ ವಿತರಣೆ ಮಾಡಲಾಯಿತು.

Comments are closed.