ಕರಾವಳಿ

ಜಾತಿ ಗಣತಿ ಸಂಬಂಧಿತ ವಿಚಾರದ ಅಧ್ಯಯನ ಸಮಿತಿಯ ಸಂಚಾಲಕರಾಗಿ ವೀರಪ್ಪ ಮೊಯ್ಲಿ

Pinterest LinkedIn Tumblr

ಮಂಗಳೂರು: ಜಾತಿ ಗಣತಿಗೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡುವ ನೂತನ ಸಮಿತಿಗೆ ಸಂಚಾಲಕರನ್ನಾಗಿ ವೀರಪ್ಪ ಮೊಯ್ಲಿ ಅವರನ್ನು ನೇಮಿಸಿ ಆದೇಶಿಸಲಾಗಿದೆ.

(ವೀರಪ್ಪ ಮೊಯ್ಲಿ- ಸಂಗ್ರಹ ಚಿತ್ರ)

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಶಿಫಾರಸ್ಸಿನ ಮೇರೆಗೆ ಜಾತಿ ಗಣತಿಗೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡುವ ನೂತನ ಸಮಿತಿ ಇದಾಗಿದೆ.

ಸಂಚಾಲಕರಾಗಿ ವೀರಪ್ಪ ಮೊಯ್ಲಿ, ಸದಸ್ಯರನ್ನಾಗಿ ಅಭಿಷೇಕ್ ಮನು ಸಿಂಘ್ವಿ, ಸಲ್ಮಾನ್ ಖುರ್ಶಿದ್, ಮೋಹನ್ ಪ್ರಕಾಶ್, ಆರ್.ಪಿ.ಎನ್ ಸಿಂಗ್, ಪಿ.ಎಲ್. ಪುನಿಯಾ, ಕುಲ್ದೀಪ್ ಬಿಶೋನಿ ಅವರನ್ನು ನೇಮಿಸಿ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಆದೇಶ ಹೊರಡಿಸಿದ್ದಾರೆ.

Comments are closed.