ಕರಾವಳಿ

ಕೊಲ್ಲೂರಿನ‌ ಪಶು ಚಿಕಿತ್ಸಾಲಯದಲ್ಲೇ ಕತ್ತು ಕುಯ್ದುಕೊಂಡು ಪಶು ವೈದ್ಯಾಧಿಕಾರಿ ಆತ್ಮಹತ್ಯೆ

Pinterest LinkedIn Tumblr

ಕುಂದಾಪುರ: ಕೊಲ್ಲೂರು ಪ್ರಾಥಮಿಕ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ. ವಿವೇಕಾನಂದ ಶೆಟ್ಟಿ (57) ಆಸ್ಪತ್ರೆ ಕಚೇರಿಯಲ್ಲಿ ಬುಧವಾರ ತಡರಾತ್ರಿ ಕತ್ತು ಕುಯ್ದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾರೆ.

ಡಾ. ವಿವೇಕಾನಂದ ಶೆಟ್ಟಿ ಕೊಲ್ಲೂರು ಪ್ರಾಥಮಿಕ ಪಶು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಗಿದ್ದು ವಿಪರೀತ ಮದುಮೇಹ ಖಾಯಿಲೆಯಿಂದಲೋ, ಅಥವಾ ವೈಯಕ್ತಿಕ ಕಾರಣಗಳಿಂದ ಮನನೊಂದು ಮಂಗಳವಾರ ಅಥವಾ ಬುಧವಾರ ಮಧ್ಯಾವಧಿಯಲ್ಲಿ ಕೊಲ್ಲೂರು ಪ್ರಾಥಮಿಕ ಪಶು ಆಸ್ಪತ್ರೆಯಲ್ಲಿ ಯಾರೂ ಇಲ್ಲದ ಸಮಯ ಒಳಗಿನಂದ ಚಿಲಕ ಹಾಕಿಕೊಂಡು ಆಸ್ಪತ್ರೆಯ ಸ್ಟಾಕ್ ರೂಮ್ ಬ್ಲೆಡ್ ನಿಂದ ಕುತ್ತಿಗೆ ಕುಯ್ದಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.