ಉಡುಪಿ: ಮತ್ತೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಹಿನ್ನೆಲೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಅವರು ನೂತನ ಸಚಿವ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಬುಧವಾರ ಕೋಟ ಬಸ್ ನಿಲ್ದಾಣ ಸಮೀಪ ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ಕಾರ್ಯಕರ್ತ ಗೋಪಾಲ ಪೈ ಮಣೂರು, ಸ್ಥಳೀಯ ಸಂಘಟಕರಾದ ಪ್ರಸಾದ್ ಬಿಲ್ಲವ, ಮನೋಹರ್ ಕೋಟ, ಸಾಮಾಜಿಕ ಹೋರಾಟಗಾರ ಸುರೇಶ್ ಗಿಳಿಯಾರ್, ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ರೋಬರ್ಟ್ ರೋಡ್ರಿಗ್ರಸ್, ಕೋಟ ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ ಪ್ರಭು, ಚಂದ್ರ ಪೂಜಾರಿ, ಸಂತೋಷ ಪೂಜಾರಿ ತೆಕ್ಕಟ್ಟೆ, ಉದ್ಯಮಿ ಸದಾನಂದ ಗಿಳಿಯಾರ್, ಸುಬ್ರಾಯ ಆಚಾರ್, ನಾಗೇಶ್ ಪೂಜಾರಿ ಬಾಳೆಬೆಟ್ಟು, ನಾಗೇಶ್ ಪೂಜಾರಿ ಗೊಬ್ಬರಬೆಟ್ಟು, ರತ್ನಾಕರ ಪೂಜಾರಿ ಬಾಳೆಬೆಟ್ಟು, ಕಾರ್ತಿಕ್ ಜಟ್ಟಿಗೇಶ್ವರ ಇನ್ನಿತರರು ಉಪಸ್ಥಿತರಿದ್ದರು.
Comments are closed.