ಕರಾವಳಿ

ಕುಂದಾಪುರ ಶಾಸಕ ಹಾಲಾಡಿ ವಿರುದ್ಧ ಅವಹೇಳನಕಾರಿ ಬರಹ; ಗ್ರಾಮಾಂತರ ಠಾಣೆಗೆ ದೂರು

Pinterest LinkedIn Tumblr

ಕುಂದಾಪುರ : ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಕೋರೋನಾ ಪಾಸಿಟಿವ್ ಬಂದ ವಿಚಾರವಾಗಿ ಪೇಸ್ ಬುಕ್‌ ಪೋಸ್ಟ್ ಒಂದರಲ್ಲಿ ವಿಕೃತವಾಗಿ ಕಮೆಂಟ್ ಮಾಡಿದ ಜಪ್ತಿ ಗ್ರಾಮದ ನಿವಾಸಿ ಅಭಿಷೇಕ್ ಮೊಗವೀರ ವಿರುದ್ದ ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಪೋಲೀಸ್ ಠಾಣೆಯಲ್ಲಿ ಬಿಜೆಪಿ ಪದಾಧಿಕಾರಿಗಳು ಹಾಗೂ ಶಾಸಕರ ಅಭಿಮಾನಿಗಳು ದೂರು ನೀಡಿದರು.

ಫೇಸ್ಬುಕ್ ಪೋಸ್ಟ್ ಒಂದಕ್ಕೆ ಸಂಬಂಧಿಸಿ ಕಮೆಂಟ್ ಮಾಡಿದ ಆರೋಪಿಯು ಶಾಸಕರ ವಿರುದ್ಧ ಅವಹೇಳನಕಾರಿಯಾಗಿ ಬರೆದಿದ್ದ.

ದೂರು ನೀಡುವ ಸಂದರ್ಭ ನಿಕಟಪೂರ್ವ ಮಂಡಲ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಕಾಡೂರು, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಪುರಸಭಾ ಸದಸ್ಯ ಸಂತೋಷ್ , ಕೆ.ಟಿ ಸತೀಶ್ ಶೆಟ್ಟಿ, ರೈತ ಮೋರ್ಚಾ ಅಧ್ಯಕ್ಷ ಸುನಿಲ್‌ ಶೆಟ್ಟಿ ಹೇರಿಕುದ್ರು, ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು, ಪ್ರವೀಣ್ ಶೆಟ್ಟಿ ಕಡ್ಕೆ ,ನಗರ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ಕಡ್ಗಿಮನೆ,ಸಚಿನ್ ಶೆಟ್ಟಿ ವಕ್ವಾಡಿ ಉಪಸ್ಥಿತರಿದ್ದರು.

Comments are closed.