ಕುಂದಾಪುರ: ನಾಡಿನೆಲ್ಲೆಡೆ ಇಂದು ಮಕರ ಸಂಕ್ರಾಂತಿ ಸಂಭ್ರಮ. ನಾಡಿನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿವೆ.
ಕುಂಭಾಶಿ ನಾಗಾಚಲ ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿಯೂ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆಯಲ್ಲಿ ಇಂದು ಪ್ರತಿಷ್ಠಾ ವರ್ಧಂತಿ ಮಹೋತ್ಸವ ನಡೆಯಿತು. ವಿಶೇಷ ಪೂಜಾ, ಧಾರ್ಮಿಕ ವಿಧಿಗಳು ಶ್ರೀ ದೇವಳದಲ್ಲಿ ನಡೆದವು.
ಇಂದು ಬೆಳಿಗ್ಗೆ 8.30ಕ್ಕೆ ಕಲಾವೃದ್ಧಿ ಹೋಮ, ಕಲಶಾಭಿಷೇಕ, ಮಹಾ ಪೂಜೆ ನೆರವೇರಿತು. ಬಳಿಕ ಅನ್ನಸಂತರ್ಪಣೆಯೂ ನಡೆಯಿತು. ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಇನ್ನು 18 ಮೆಟ್ಟಿಲೇರಿ ಬಂದ ಮಾಲಾಧಾರಿಗಳು ತುಪ್ಪದ ಕಾಯಿ ಮೊದಲಾದ ಸೇವೆ ಸಲ್ಲಿಸಿದರು. ಮಹಿಳಾ ಭಕ್ತರಿಗೂ ಅಯ್ಯಪ್ಪ ಸ್ವಾಮೀ ದೇವರ ದರ್ಶನವಿರುವುದು ಇಲ್ಲಿನ ವಿಶೇಷ.
(ವರದಿ- ಯೋಗೀಶ್ ಕುಂಭಾಸಿ)
Comments are closed.