ಉಚ್ಚಿಲ: ಇಲ್ಲಿನ ಪೊಲ್ಯ ಹಿಮಾಯತುಲ್ ಇಸ್ಲಾಂ ಮಸೀದಿ ಮತ್ತು ಮದ್ರಸ ಇದರ ನೂತನ ಅಧ್ಯಕ್ಷರಾಗಿ ಹಸನ್ ಮುನ್ನಾಕ ಹಾಗು ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಕೆ. ಹೆಚ್ ಆಯ್ಕೆಯಾಗಿದ್ದಾರೆ.
ಮಸೀದಿ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯು ರವಿವಾರ ಮದ್ರಸ ಹಾಲ್ನಲ್ಲಿ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಹಾತಿಂ ಶೇಖ್, ಉಪಾಧ್ಯಕ್ಷರಾಗಿ ಅಲಿಯಬ್ಬ ಕಟಪಾಡಿ, ಜೊತೆ ಕಾರ್ಯದರ್ಶಿಯಾಗಿ ಶಬ್ಬೀರ್ ಸುಲೈಮಾನ್, ಕೋಶಾಧಿಕಾರಿಯಾಗಿ ಅಬೂಬಕ್ಕರ್ ಮೊನಬ್ಬ ಆಯ್ಕೆ ಮಾಡಲಾಯಿತು.
ಮಸೀದಿ ಖತೀಬ್ ಯಾಸೀನ್ ಅಹ್ಸನಿ ದುವಾ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ತವಕ್ಕಲ್ ಎಂಗ್ ಮೆನ್ಸ್ ಎಸೋಸಿಯೆಶನ್ ಉಚ್ಚಿಲ ಇದರ ಅಧ್ಯಕ್ಷ ಅಬ್ದುಲ್ ರಜಾಕ್ ಮೊನಬ್ಬ ವಹಿಸಿದ್ದರು. ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಕಾರ್ಯದರ್ಶಿಅಬ್ದುಲ್ ರಜಾಕ್ ಪೊಲ್ಯ ವಾಚಿಸಿದರು. ಮಜೀದ್ ಬಿರಾಲಿ ಕಾರ್ಯಕ್ರಮ ನಿರೂಪಿಸಿದರು.
Comments are closed.