ಉಡುಪಿ: ಫ್ಲಾಟ್ನಲ್ಲಿ ವಾಸವಿದ್ದ ಹೋಟೆಲ್ ನೌಕರರ ಮೊಬೈಲ್ ಫೋನುಗಳು ಹಾಗೂ ನಗದು ಕಳವುಗೈದ ಘಟನೆ ಉಡುಪಿ ಬನ್ನಂಜೆಯಲ್ಲಿ ನಡೆದಿದೆ. ಈ ಬಗ್ಗೆ ಉಡುಪಿ ನಗರ ಠಾಣೆಗೆ ವಿಜಯ್ ಪೂಜಾರಿ ಎನ್ನುವರು ದೂರು ನೀಡಿದ್ದಾರೆ.
ಉಡುಪಿಯ ಶಾಂತಿ ಸಾಗರ್ ಹೋಟೆಲ್ನಲ್ಲಿ ವಿಜಯ್ ಹಾಗೂ ಇತರರು ಕೆಲಸ ಮಾಡಿಕೊಂಡಿದ್ದು. ಅವರುಗಳಿಗೆ ಉಳಿದುಕೊಳ್ಳಲು ಹೋಟೆಲ್ ಮಾಲಕರು ಬನ್ನಂಜೆಯಲ್ಲಿರುವ ಫ್ಲಾಟ್ವೊಂದರಲ್ಲಿ ಮನೆಯನ್ನು ಮಾಡಿಕೊಟ್ಟಿದ್ದುಇನ್ನೋರ್ವ ಕಾರ್ಮಿಕ ಕೆಲಸ ಮುಗಿಸಿ ತಡವಾಗಿ ಮನೆಗೆ ಬಂದಿದ್ದು ಮನೆಯ ಬಾಗಿಲನ್ನು ಹಾಕಲು ಮರೆತು ಮಲಗಿದ್ದರು. ಈ ಸಂದರ್ಭ ಕಳ್ಳರು ಮನೆಯ ಒಳಗಡೆ ಪ್ರವೇಶಿಸಿ ವಿಜಯ್ ಹಾಗೂ ಇತರರಿಗೆ ಸಂಬಂಧಿಸಿದ 56,000/- ಮೌಲ್ಯದ ಒಟ್ಟು 8 ಮೊಬೈಲ್ಗಳನ್ನು ಹಾಗೂ ಸತೀಶ್ ಪ್ರಭು ಎನ್ನುವರ ಪರ್ಸ್ ಹಾಗೂ ಅದರಲ್ಲಿದ್ದ ರೂಪಾಯಿ 2000/- ನಗದು ಹಣವನ್ನು ಕಳವುಗೈಯಲಾಗಿದೆ.
ಕಳವಾದ ಸ್ವತ್ತಿನ ಒಟ್ಟು ಮೌಲ್ಯ ರೂಪಾಯಿ 58,000/- ಆಗಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.