ಕರಾವಳಿ

ಹೆಜ್ಜೇನು ದಾಳಿಯಿಂದ ಗಂಭೀರಗೊಂಡಿದ್ದ ವ್ಯಕ್ತಿ ಸಾವು

Pinterest LinkedIn Tumblr

ಕುಂದಾಪುರ: ತಾಲೂಕಿನ ಶ್ರೀ ದುರ್ಗಾಕೂಡ್ಲು ಕನ್ಯಾನ ನಿವಾಸಿ ಜಗನ್ನಾಥ ಶೆಟ್ಟಿ (88) ಎಂಬವರು ಹೆಜ್ಜೇನು ದಾಳಿಯದ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.

(ಸಾಂದರ್ಭಿಕ ಚಿತ್ರ)

ಸೋಮವಾರ ಬೆಳಗ್ಗೆ ಮನೆಯಿಂದ ಪಕ್ಕದ ಮನೆಯ ತೋಟದಲ್ಲಿ ವಾಕಿಂಗ್ ಮಾಡುವಾಗ ಹೆಜ್ಜೇನು ದಾಳಿ ನಡೆಸಿತ್ತು ಗಂಭೀರ ಗಾಯಗೊಂಡ ಅವರಿಗೆ ಮೊದಲು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಅವರು ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.