ಕರಾವಳಿ

ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಅಂತಿಮ ಬಿಕಾಂ ವಿದ್ಯಾರ್ಥಿನಿ

Pinterest LinkedIn Tumblr

ಕುಂದಾಪುರ: ಶಂಕರನಾರಾಯಣ ಪ್ರಥಮದರ್ಜೆ ಕಾಲೇಜ್ ಅಂತಿಮ ಬಿಕಾಂ ವಿದ್ಯಾರ್ಥಿನಿ ಮನೆ ಬಾವಿಗೆ ಹಾರಿ ಹಾರಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

(ಸಾಂದರ್ಭಿಕ ಚಿತ್ರ)

ಅಮಾಸೆಬೈಲು ಗ್ರಾಮ ಹುಣಸೇಮನೆ ಜಡ್ಡಿನಗದ್ದೆ ನಿವಾಸಿ ದಿವ್ಯಾ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ದಿವ್ಯಾ ಎಂದಿನಂತೆ ಬುಧವಾರ ಮನೆಯಿಂದ ಕಾಲೇಜಿಗೆ ಹೋಗಿಬಂದಿದ್ದಳು. ಕಾಲೇಜಿಂದ ಬಂದ ದಿವ್ಯ ಚಿಂತೆಯಲ್ಲಿದ್ದು, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.