ಉಡುಪಿ: ಕನ್ನಡ ಪರ ಸಂಘಟನೆಗಳು ಕರೆಕೊಟ್ಟ ರಾಜ್ಯ ಬಂದ್’ಗೆ ಉಡುಪಿ ಜಿಲ್ಲಾದ್ಯಂತ ಯಾವುದೇ ಬೆಂಬಲ ಸಿಕ್ಕಿಲ್ಲ. ಈ ಹಿನ್ನೆಲೆ ಶನಿವಾರ ಜನಜೀವನ ಯಥಾಸ್ಥಿತಿಯಿತ್ತು.
ಕನ್ನಡಪರ ಸಂಘಟನೆಗಳು ಕರೆಕೊಟ್ಟ ಕರ್ನಾಟಕ ಬಂದ್ ಇದಾಗಿದ್ದು ಜಿಲ್ಲೆಯ ಕಾಪು, ಕುಂದಾಪುರ, ಬೈಂದೂರು ಹಾಗೂ ಕಾರ್ಕಳದಲ್ಲಿ ಯಾವುದೇ ಬಂದ್ ಇಲ್ಲದಿದ್ದು ಎಲ್ಲವೂ ನಿತ್ಯದಂತೆ ನಡೆದಿದೆ.
ಕುಂದಾಪುರದಲ್ಲಿ ನಡೆಯುವ ಶನಿವಾರ ಸಂತೆಯೂ ಮಾಮೂಲಿಯಂತೆ ಆಗಿತ್ತು. ಜಿಲ್ಲಾದ್ಯಂತ ಆಟೋ ರಿಕ್ಷಾ, ಟ್ಯಾಕ್ಸಿ, ಕೆ.ಎಸ್.ಆರ್.ಟಿ.ಸಿ, ಖಾಸಗಿ ಬಸ್ಸು ಸೇವೆ ನಿರಾತಂಕವಾಗಿ ಸಾಗಿತ್ತು.
Comments are closed.