ಉಡುಪಿ: ಮಹಿಳೆಯೊಬ್ಬರು ನಡೆದು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಬೈಕ್ ಸವಾರನೊಬ್ಬ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಎಳೆದು ಪರಾರಿಯಾದ ಘಟನೆ ಉಡುಪಿ ಬೋರ್ಡ್ ಹೈಸ್ಕೂಲ್ ಬಳಿ ನಡೆದಿದೆ.
ಉಡುಪಿ ಬ್ರಹ್ಮಗಿರಿ ನಿವಾಸಿ ವಾರಿಜ (57) ಚಿನ್ನಸ ಕರಿಮಣಿ ಕಳೆದುಕೊಂಡವರು.
ವಾರಿಜ ಅವರು ಉಡುಪಿ ಬೋರ್ಡ್ ಹೈಸ್ಕೂಲ್ ಶಾಲೆಯ ಹಿಂಬದಿ ರಸ್ತೆಯಲ್ಲಿ ತನ್ನ ತಂಗಿಯೊಂದಿಗೆ ಮೀನಿನ ಬುಟ್ಟಿಯನ್ನು ಹೊತ್ತುಕೊಂಡು ಬರುತ್ತಿರುವಾಗ ರಸ್ತೆಯ ಬದಿಯಲ್ಲಿ ಕಪ್ಪು ಬಣ್ಣದ ಬೈಕಿನಲ್ಲಿ ಕುಳಿತುಕೊಂಡಿದ್ದ ಕೆಂಪು -ತಿಳಿ ಗುಲಾಬಿ ಇತರೆ ಬಣ್ಣದ ತುಂಬು ತೋಳಿನ ಚೆಕ್ಸ್ ಶರ್ಟ್, ಜೀನ್ಸ್ ಪ್ಯಾಂಟ್ನ್ನು ಧರಿಸಿದ್ದ ಅಂದಾಜು 30 ವರ್ಷ ಪ್ರಾಯದ ಅಪರಿಚಿತ ಯುವಕನೊಬ್ಬನು ವಾರಿಜ ಅವರ ಹಿಂದಿನಿಂದ ಬಂದು ಅವರ ಕತ್ತನ್ನು ಹಿಡಿದು ಕುತ್ತಿಗೆಯಲ್ಲಿದ್ದ 4 ಪವನ್ ತೂಕದ 1 ಲಕ್ಷ 20 ಸಾವಿರ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಹೋಗಿದ್ದಾನೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.