ಉಡುಪಿ: ಎಟಿಎಂ ಕಾರ್ಡ್ ಇಲ್ಲದೆ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಅಪರಿಚಿತರು ಹಣ ವಿತ್ ಡ್ರಾ ಮಾಡಿರುವ ಘಟನೆ ನಡೆದಿದೆ. ಉಡುಪಿಯ ಮೂಡುಬೆಟ್ಟು ನಿವಾಸಿ ನಿವಾಸಿ ಸದಾನಂದ ಭಂಡಾರಿ(62) ಹಣ ಕಳೆದುಕೊಂಡ ವ್ಯಕ್ತಿ. ಅಪರಿಚಿತ ಕಿಡಿಗೇಡಿಗಳು ಬೆಂಗಳೂರಿನ ಅಲಂಕಾರ್ ಫ್ಲಾಜಾ ಎಂಬಲ್ಲಿ ಹಣ ವಿತ್ ಡ್ರಾ ಮಾಡಿದ್ದು ತಿಳಿದುಬಂದಿದೆ.
(ಸಾಂದರ್ಭಿಕ ಚಿತ್ರ)
ಸದಾನಂದ ಅವರದ್ದು ಉಡುಪಿಯಲ್ಲಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕ್ ಖಾತೆ ಇದ್ದು ಇತ್ತೀಚೆಗೆ ಕೆನರಾ ಬ್ಯಾಂಕ್ ಎ.ಟಿ.ಎಂ. ನಲ್ಲಿ ಹಣ ತೆಗೆಯಲು ಹೋಗಿ, ಕಾರ್ಡ್ಸ್ವೈಪ್ ಮಾಡಿದ್ದು ಹಣ ಬಂದಿರಲಿಲ್ಲ. ಆದರೆ ಬುಧವಾರ ಇವರ ಖಾತೆಯಿಂದ 10,000 ರೂಪಾಯಿಗಳಂತೆ ಒಟ್ಟು ರೂಪಾಯಿ 40,000 ರೂಪಾಯಿ ವಿತ್ ಡ್ರಾ ಆಗಿರುವ ಮೆಸ್ಸೆಜ್ ಬಂದಿದೆ. ಕಿಡಿಗೇಡಿಗಳು ಯಾವ ರೀತಿಯಲ್ಲಿ ಹಣ ವಿತ್ ಡ್ರಾ ಮಾಡಿದ್ದಾರೆ ಎಂಬುವುದಾಗಿ ತಿಳಿದುಬಂದಿಲ್ಲ.
ಈ ಬಗ್ಗೆ ಸದಾನಂದ ಭಂಡಾರಿಯವರು ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Comments are closed.