ಕರಾವಳಿ

ಮ”ದ್ಯ ಕೊಳ್ಳಲು ಹಣವಿಲ್ಲದೆ ನೊಂದ ವ್ಯಕ್ತಿ ನೇ”ಣು ಬಿಗಿದು ಆ”ತ್ಮಹ”ತ್ಯೆ

Pinterest LinkedIn Tumblr

ಉಡುಪಿ: ಮ”ದ್ಯ ಖರೀದಿಸಲು ಹಣವಿಲ್ಲವೆಂದು ನೊಂದ ವ್ಯಕ್ತಿಯೊಬ್ಬರು ಮನನೊಂದು ಆ”ತ್ಮಹ”ತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರದ ಹೆಗ್ಗುಂಜೆ ಗ್ರಾಮದ ಹೊನ್ನೆಕುಂಬ್ರಿ ಎಂಬಲ್ಲಿ ನಡೆದಿದೆ. ಇಲ್ಲಿನ ರಾಮ ನಾಯ್ಕ(50) ಆ”ತ್ಮಹ”ತ್ಯೆ ಮಾಡಿಕೊಂಡ ವ್ಯಕ್ತಿ.

ಇವರು ಮ”ದ್ಯ ಸೇವಿಸುವ ಚಟಹೊಂದಿದ್ದರು. 4 ವರ್ಷದ ಹಿಂದೆ ತೆಂಗಿನ ಮರದಿಂದ ಬಿದ್ದು ಬೆನ್ನಿನ ಹಿಂಭಾಗಕ್ಕೆ ಗಾಯವಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಬಳಿಕ ಹೊನ್ನೆಕುಂಬ್ರಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಳೆದ 4 ದಿನಗಳಿಂದ ಸರಿಯಾಗಿ ಕೆಲಸವಿಲ್ಲದೇ ಮ”ದ್ಯ ಕುಡಿಯಲು ಹಣವಿಲ್ಲದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದುಕೊಂಡು ಮನೆಯಲ್ಲಿ ವಿಚಿತ್ರವಾಗಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ. ಮಂಗಳವಾರದಂದು ಹೊನ್ನೆಕುಂಬ್ರಿ ಶೀನ ನಾಯ್ಕರ ಭತ್ತದ ಗದ್ದೆಯ ಪಕ್ಕದಲ್ಲಿ ಮರಕ್ಕೆ ಹ’ಗ್ಗದಿಂದ ನೇ”ಣು ಬಿಗಿದು ಆ”ತ್ಮಹ”ತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊ”ಲೀಸ್ ಠಾ’ಣೆಯಲ್ಲಿ ಪ್ರ”ಕರಣ ದಾಖಲಾಗಿದೆ.

Comments are closed.