ಕರಾವಳಿ

ಮೋದಿ ಜನ್ಮದಿನ : ವಿವೇಕ್ ಟ್ರೇಡರ್ಸ್‌ನಿಂದ ಉಚಿತ “ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಹಾಗೂ ಉಚಿತ ಆಯುಷ್ ಕ್ವಾಥ್ ಚೂರ್ಣದ ಮಾತ್ರೆ ವಿತರಣೆ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.18: ಶ್ರೀ ನರೇಂದ್ರಮೋದಿಜಿಯವರ ಜನ್ಮದಿನದ ಪ್ರಯುಕ್ತ ಮಂಗಳೂರಿನ ವಿವೇಕ್ ಟ್ರೇಡರ್ಸ್ ಸಂಸ್ಥೆ ವತಿಯಿಂದ ಗುರುವಾರ (ಸೆಪ್ಟೆಂಬರ್ 17) “ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಹಾಗೂ ಉಚಿತ ಒಂದು ತಿಂಗಳ ರೋಗನಿರೋಧಕ ಶಕ್ತಿ ಹೆಚ್ಚಿಸುವ ಭಾರತ ಸರಕಾರದ ಆಯುಷ್ ಇಲಾಖೆ ಪ್ರಮಾಣೀಕರಿಸಿದ ಆಯುಷ್ ಕ್ವಾಥ್ ಚೂರ್ಣದ ಮಾತ್ರೆ ವಿತರಣೆ ಕಾರ್ಯಕ್ರಮ ನಗರದ ಹಂಪನಕಟ್ಟೆಯಲ್ಲಿರುವ ( ಮಂಗಳೂರು ವಿವಿ ಕಾಲೇಜು ಮುಂಭಾಗ) ಪ್ರಸಿದ್ದ ಆಯುರ್ವೇದ ಸಂಸ್ಥೆ ವಿವೇಕ್ ಟ್ರೇಡರ್ಸ್ ಇದರ ರಿಟೈಲ್ ಮಳಿಗೆ ಆಯುರ್ ವಿವೇಕ್‌ನಲ್ಲಿ ನಡೆಯಿತು.

ಶ್ರೀ ನರೇಂದ್ರಮೋದಿಜಿಯವರ ಜನ್ಮದಿನದ ಪ್ರಯುಕ್ತ ಗುರುವ್ರಾ ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಆಯುಷ್ ಇಲಾಖೆ ಪ್ರಮಾಣೀಕರಿಸಿದ ಆಯುಷ್ ಕ್ವಾಥ್ ಚೂರ್ಣದ ಮಾತ್ರೆಯನ್ನು ಪ್ರಧಾನಿಗಳ ಆಶಯದಂತೆ ಕೊರೋನಾ ಎಂಬ ಮಹಾಮಾರಿಯನ್ನು ಜೊತೆಯಾಗಿ ಎದುರಿಸಿ ಎಂಬ ಮಾತಿನಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆಲ್ಲಾ ಉಚಿತವಾಗಿ ವಿತರಿಸಲಾಯಿತು.

ಭಾರತ ಸರಕಾರದ ಆಯುಷ್ ಇಲಾಖೆ ಅಂಗೀಕೃತ ರೋಗ ನಿರೋಧಕ ಹೆಚ್ಚಿಸುವ ಔಷಧಗಳ ಮಿಶ್ರಣ ಆಯುಷ್ ಕ್ವಾಥ್ ಚೂರ್ಣದ ಮಾತ್ರೆ ಇದಾಗಿದ್ದು ದಿನಕ್ಕೆರಡು ಬಾರಿ ಬಿಸಿ ನೀರಿನಲ್ಲಿ ಕಲೆಸಿ ರುಚಿಗೆ ಸಿಹಿಯನ್ನು ಸೇರಿಸಿ ಎರಡು ಹನಿ ನಿಂಬೆರಸ ಸೇರಿಸಿ ಕುಡಿಯಬಹುದಾಗಿದೆ.

ಇದೇ ವೇಳೆ ಶ್ರೀ ನರೇಂದ್ರಮೋದಿಯವರ ಅತೀ ಉಪಯುಕ್ತ ಜನಪರ ಆರೋಗ್ಯಪರ ಯೋಜನೆಯಾದ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೋಂದಣೆ ಕೂಡ ಉಚಿತವಾಗಿ ಮಾಡಿಕೊಡಲಾಯಿತು.

ಸುಮಾರು 5,500ಕ್ಕೂ ಅಧಿಕಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದುಕೊಂಡರು. ನಿರೀಕ್ಷೆಗೂ ಮೀರಿ ಜನರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಯಿತು.ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ನಾವು ಆಭಾರಿಯಾಗಿದ್ದೇವೆ ಮತ್ತು ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ ಎಂದು ವಿವೇಕ್ ಟ್ರೇಡರ್ಸ್ ಸಂಸ್ಥೆ ಪಾಲುದಾರರಾದ ಮಂಗಲ್ಪಾಡಿ ನರೇಶ್ ಶೆಣೈ ತಿಳಿಸಿದ್ದಾರೆ.

Comments are closed.