ಕರಾವಳಿ

ಅಭ್ಯುದಯ ಬ್ಯಾಂಕ್ ಸಂಪೂರ್ಣವಾಗಿ ಭದ್ರವಾಗಿದೆ – ನಿಮ್ಮ ಠೇವಣಿ ಸುರಕ್ಷಿತ : ಪ್ರೇಮನಾಥ್ ಸಾಲ್ಯಾನ್

Pinterest LinkedIn Tumblr

ಮುಂಬಯಿ : ಅಭ್ಯುದಯ ಬ್ಯಾಂಕ್ ಭದ್ರವಾಗಿದೆ. ಬ್ಯಾಂಕಿನಲ್ಲಿರುವ ನಿಮ್ಮ ಠೇವಣಿ ಸುರಕ್ಷಿತವಾಗಿದೆ. ಸಮಾಜಿಕ ತಾಣಗಳಲ್ಲಿ ಮುಖ್ಯವಾಗಿ ವಾಟ್ಸಪ್ ಸಂದೇಶಗಲ್ಲಿ ಕೆಲವು ಕಿಡಿಗೇಡಿಗಳು ಮಾಡುತ್ತಿರುವ ಅಪಪ್ರಚಾರಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದೆ ಎಂದು ಅಭ್ಯುದಯ ಕೋ. ಆಪರೇಟಿವ್ ಬ್ಯಾಂಕಿನ ಆಡಳಿತ ನಿರ್ದೇಶಕ . ಪ್ರೇಮನಾಥ್ ಎಸ್. ಸಾಲ್ಯಾನ್ ತಿಳಿಸಿದ್ದಾರೆ.

ಮಾಧ್ಯಮ ಜೊತೆ ಮಾತನಾಡಿದ ಪ್ರೇಮನಾಥ್ ಎಸ್. ಸಾಲ್ಯಾನ್ ರು ದೇಶದ ಮೂರು ರಾಜ್ಯಗಳಲ್ಲಿ 111 ಶಾಖೆಗಳನ್ನು ಹೊಂದಿರುವ ಕಳೆದ 56 ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿ ನಿರತವಾಗಿರುವ ಅಭ್ಯುದಯ ಬ್ಯಾಂಕ್ ನ ಬಗ್ಗೆ ಇತ್ತೀಚೆಗೆ ಕೆಲವರು ಅಪಪ್ರಚಾರದ ಸಂದೇಶಗಳನ್ನು ಮೊಬೈಲ್ ಮುಖಾಂತರ ರವಾನಿಸುತ್ತಿದ್ದು ಬ್ಯಾಂಕಿನ ಆಡಳಿತ ಮಂಡಳಿಯು ಈಗಾಗಲೇ ಪೋಲಿಸರಿಗೆ ದೂರು ಸಲ್ಲಿಸಿದ್ದು ಅವರ ಮೇಲೆ ಸೂಕ್ರ ಕ್ರಮ ಕೈಗೊಳ್ಳುವಂತೆ ವಿನಂತಿಸಿದೆ.

ಗ್ರಾಹಕರ ಹಣವು ನಮ್ಮ ಬ್ಯಾಂಕಿನಲ್ಲಿ ಸುರಕ್ಷಿತವಾಗಿದ್ದು ಬ್ಯಾಂಕಿನ ಬಗ್ಗೆ ಯಾವುದೇ ಅಪಪ್ರಚಾರಕ್ಕೆ ಕಿವಿ ಕೊಡಬಾರದು ಎಂದು ಸಾಲ್ಯಾನ್ ಅವರು ಅಭ್ಯುದಯ ಬ್ಯಾಂಕ್ ನ ಗ್ರಾಹಕರಲ್ಲಿ ವಿನಂತಿಸಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಈಗಾಗಲೇ 18 ಸಾವಿರ ಕೋಟಿ ರೂಪಾಯಿಯ ವ್ಯವಹಾರವನ್ನು ನಡೆಸುತ್ತಿರುವ ಬ್ಯಾಂಕ್ ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಉನ್ನತ ಸ್ಥಾನದಲ್ಲಿರುವ ಅಭ್ಯುದಯ ಬ್ಯಾಂಕ್ ಆರ್.ಬಿ.ಐ. ನಿಯಮವನ್ನು ಪಾಲಿಸಿತ್ತಾ ವ್ಯವಹಾರವನ್ನು ನಡೆಸುತ್ತಿದ್ದು
ಕೆಲವು ದೇಶದ್ರೋಹಿಗಳು ಸುಳ್ಳು ಮಾಹಿತಿಯ ಮೂಲಕ ಗ್ರಾಹಕರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಮಾಡುತ್ತಿರುವುದು ನಿಜಕ್ಕೂ ವಿಶಾದನೀಯ ಎಂದು ಪ್ರೇಮನಾಥ್ ಎಸ್. ಸಾಲ್ಯಾನ್ ತಿಳಿಸಿದ್ದಾರೆ

ವರದಿ : ದಿನೇಶ್ ಕುಲಾಲ್, ಮುಂಬಯಿ.

Comments are closed.