ಕುಂದಾಪುರ: ಕುಂದಾಪುರದಿಂದ ಉಡುಪಿಯ ಆದಿ ಉಡುಪಿ ಕಡೆಗೆ ತೆರಳುತ್ತಿದ್ದ ತರಕಾರಿ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಚಾಲಕ ಸೇರಿದಂತೆ ಸಹ ಪ್ರಯಾಣಿಕ ಸ್ಥಳದಲ್ಲೇ ಮೃತ ಪಟ್ಟ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿಯ 66 ರ ಸಂತೆ ಕಟ್ಟೆ ಬಳಿ ಇಂದು ಮುಂಜಾನೆ 5.45 ರ ಸುಮಾರಿಗೆ ನಡೆದಿದೆ.
ಮೃತಪಟ್ಟವರನ್ನು ಕುಂದಾಪುರ ತಾಲೂಕಿನ ಹೇರಿಕೇರಿ ಗ್ರಾಮದ ನಿವಾಸಿಗಳಾದ ದಿನೇಶ್ (35 )ಮತ್ತು ಮಂಜು (21) ಎಂದು ಗುರುತಿಸಲಾಗಿದೆ.
ಇವರು ತರಕಾರಿ ವ್ಯಾಪಾರವನ್ನ ಮಾಡುತ್ತಿದ್ದು ಇಂದು ಮುಂಜಾನೆ ಕುಂದಾಪುರದಿಂದ ಉಡುಪಿಯ ಆದಿ ಉಡುಪಿ ಎ ಪಿ ಎಂ ಸಿ ಮಾರುಕಟ್ಟೆಗೆ ತರಕಾರಿ ಕೊಂಡುಕೊಳ್ಳಲು ಟೆಂಪೋ ಟ್ರಾಕ್ಸ್ ನಲ್ಲಿ ತೆರಳುತ್ತಿದ್ದಾಗ ಸಂತೆಕಟ್ಟೆ ಆಶೀರ್ವಾದ ಚಿತ್ರ ಮಂದಿರದ ಬಳಿ ಇರುವ ಸ್ವಾಗತ ಕಮಾನಿಗೆ ಟೆಂಪೋ ಢಿಕ್ಕಿ ಹೊಡೆದಿದೆ. ಸ್ವಾಗತ ಕೋರುವ ಕಂಬಕ್ಕೆ ಡಿಕ್ಕಿಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
Comments are closed.