ಕರಾವಳಿ

ಉಡುಪಿ ಪುರಸಭೆ ಮಾಜಿ ಅಧ್ಯಕ್ಷ, ಆರ್.ಎಸ್.ಎಸ್. ಮುಖಂಡ ಸೋಮಶೇಖರ್ ಭಟ್’ರಿಗೆ ಪ್ರಧಾನಿ ಮೋದಿ ಕರೆ

Pinterest LinkedIn Tumblr

ಉಡುಪಿ: ಉಡುಪಿ ಪುರಸಭೆ ಮಾಜಿ ಅಧ್ಯಕ್ಷ ಸೋಮಶೇಖರ್ ಭಟ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದರು.

ಶುಕ್ರವಾರ ಬೆಳಗ್ಗೆ ಸೋಮಶೇಖರ್ ಭಟ್ ಅವರಿಗೆ ಕರೆ ಮಾಡಿ ಸುಮಾರು ಎರಡು ನಿಮಿಷಗಳ ಕಾಲ ಪ್ರಧಾನಿ ಮೋದಿಯವರು ಮಾತನಾಡಿ ಆರೋಗ್ಯದ ಬಗ್ಗೆ ಕುಶಲೋಪರಿ ವಿಚಾರಿಸಿದರು.

1968ರಲ್ಲಿ ಜನ ಸಂಘ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಉಡುಪಿ ಪುರಸಭೆಯಲ್ಲಿ ಖಾತೆ ತೆರೆದಾಗ ತಾನೂ ಪುರಸಭೆ ಆಗಿದ್ದೆ. ಆಗ ವಿ.ಎಸ್. ಆಚಾರ್ಯ ಅವರು ಉಡುಪಿ ಪುರಸಭೆ ಅಧ್ಯಕ್ಷರಾಗಿದ್ದರು ಎಂದು ಸೋಮಶೇಖರ್ ಭಟ್ ನೆನಪಿಸಿಕೊಂಡರು.

ಜೈಪುರದಲ್ಲಿ ಪುರಸಭೆ ಸದಸ್ಯರ ಅಧಿವೇಶನದಲ್ಲಿ ತಮ್ಮನ್ನು ಭೇಟಿಯಾಗಿದ್ದ ಬಗ್ಗೆ, ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲು ಸೇರಿದ್ದ ಘಟನೆಗಳನ್ನು ಸೋಮಶೇಖರ್ ಭಟ್ ಅವರು ಮೋದಿಯವರ ಜೊತೆಗಿನ ಮಾತುಕತೆಯಲ್ಲಿ ನೆನಪಿಸಿಕೊಂಡರು.

Comments are closed.