ಕರಾವಳಿ

ಕೊರೊನಾ ಲಾಕ್‌ಡೌನ್‌: ಬೇಸತ್ತ ಕಾರ್ಕಳ ಮೂಲದ ಅರ್ಚಕ ಮುಂಬೈಯಲ್ಲಿ ನೇಣಿಗೆ ಶರಣು

Pinterest LinkedIn Tumblr

ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ನೀರೆಬೈಲೂರಿನ ಅರ್ಚಕರೊಬ್ಬರು ಪೂಜೆಗೆಂದು ಮುಂಬೈಗೆ ತೆರಳಿದ್ದು ಲಾಕ್‌ಡೌನ್‌ ವಿಸ್ತರಣೆಯಾದ ಕಾರಣ ಬೇಸತ್ತು ಮಂಗಳವಾರ ಮುಂಬೈನ ಕಾಂದಿವಿಲಿ ದೇವಸ್ಥಾನ ಆವರಣದಲ್ಲಿ ನೇಣಿಗೆ ಶರಣಾಗಿದ್ದಾರೆ.

ಕಾರ್ಕಳದ ನೀರೆಬೈಲೂರು ನಿವಾಸಿ ಕೃಷ್ಣ ಶಾಂತಿ (37) ಆತ್ಮಹತ್ಯೆ ಮಾಡಿಕೊಂಡ ಅರ್ಚಕ.

ಮುಂಬೈನ ಕಾಂದಿವಿಲಿ ಪ್ರದೇಶದಲ್ಲಿರುವ ಭದ್ರಾಕಾಳಿ ದೇವಸ್ಥಾನದಲ್ಲಿ ಪೂಜೆಗೆಂದು ಬದಲಿ ಅರ್ಚಕರಾಗಿ ಇವರು ಮಾ.17 ರಂದು ತೆರಳಿದ್ದು ಲಾಕ್‌ಡೌನ್‌ ಇದ್ದ ಕಾರಣದಿಂದಾಗಿ ಪೂಜೆಯು ಇಲ್ಲದೇ ಊರಿಗೂ ಮರಳಿ ಬರಲಾಗದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದು ಎಪ್ರಿಲ್‌ 14 ರ ಬಳಿಕವಾದರೂ ಊರಿಗೆ ಮರಳಬಹುದೆಂಬ ನಿರೀಕ್ಷೆಯಲ್ಲಿದ್ದರು. ಆ ದಿನ ಮೋದಿಯ ಭಾಷಣ ಕೇಳಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Comments are closed.