ಕುಂದಾಪುರ: ಕುಂದಾಪುರ ಉಪವಿಭಾಗ ವ್ಯಾಪ್ತಿಯ ವಿವಿಧ ಠಾಣಾ ಪೊಲೀಸರು ಭಾನುವಾರ ರಿಕ್ರಿಯೇಶನ್ ಕ್ಲಬ್ಗಳ ಮೇಲೆ ನಡೆಸಿದ ದಾಳಿಯಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ನಗದು, ಹಲವು ಮೊಬೈಲ್, ಕಾರು, ನೈಕುಗಳು ಹಾಗೂ ಗ್ಯಾಂಬ್ಲಿಂಗ್ ನಲ್ಲಿ ತೊಡಗಿದ್ದ ೪೦ಕ್ಕೂ ಅಧಿಕ ಜುಗಾರಿಕೋರರನ್ನು ವಶಕ್ಕೆ ಪಡೆದಿದ್ದಾರೆ.
ಕುಂದಾಪುರ ತಾಲೂಕು ಗೋಳಿಯಂಗಡಿ, ಸಿದ್ದಾಪುರ, ಕೋಟೇಶ್ವರ ಕಾಗೇರಿ, ಬೈಂದೂರು ಸೇರಿದಂತೆ ವಿವಿದೆಡೆ ರಿಕ್ರಿಯೇಶನ್ ಕ್ಲಬ್ಗಳ ಮೇಲೆ ದಾಳಿ ನಡೆಸಿ, ಗ್ಯಾಂಬ್ಲಿಂಗ್ (ಜುಗಾರಿ) ನಡೆಸುತ್ತಿದ್ದ ಆಪಾದಿತರ ಸಹಿತ ವಾಹನ ಹಾಗೂ ಮೊಬೈಲ್ ಸೀಜ್ ಮಾಡಲಾಗಿದೆ. ರಿಕ್ರಿಯೇಶನ್ ಕ್ಲಬ್ ನ್ಯಾಯಾಲಯದ ಅನುಮತಿಯಲ್ಲಿ ನಡೆದರೂ ಕೂಡ ಎಲ್ಲಾ ಷರತ್ತುಗಳನ್ನು ಗಾಳಿಗೆ ತೂರಿದ್ದಾರೆ ಎನ್ನಲಾಗಿದೆ. ಐಡಿ ಕಾರ್ಡ್ ಇಲ್ಲದ ಆಟಗಾರರು ಕ್ಲಬ್ಬಿನಲ್ಲಿರುವುದು, ಕ್ಲಬ್ ಸದಸ್ಯರು ಇಲ್ಲದಿರುವುದು. ಸಿಸಿ ಟಿವಿಗಳನ್ನು ಆಫ್ ಮಾಡಿದ ಬಗ್ಗೆಯೂ ದಾಳಿ ವೇಳೆ ತಿಳಿದುಬಂದಿದೆ.

ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೇಶ್ವರ ಗ್ರಾಮದ ಕಾಗೇರಿಯಲ್ಲಿರುವ ರಿಕ್ರಿಯೇಶನ್ ಕ್ಲಬ್ನಲ್ಲಿ ಜುಗಾರಿ ಆಡುತ್ತಿದ್ದ ಬಸ್ರೂರು ಕೋಳ್ಕೆರೆ ಸೂರ ಪೂಜಾರಿ (65), ಕರ್ಕುಂಜೆ ಕೆಂಚನೂರು ಜಯರಾಜ (44), ಕೋಟೇಶ್ವರ ಅಂಕದಕಟ್ಟೆ ಎಸ್ ಕುಮಾರ್ (54), ಯಡಾಡಿ ಮತ್ಯಾಡಿ ಗಣೇಶ (46), ಕುಂದಾಪುರ ಹಂಗಳೂರು ಸಂತೋಷ (42), ಕುಂದಾಪುರದ ಶೀನ ಪೂಜಾರಿ (64), ಕೋಟೇಶ್ವರ ಮಂಜುನಾಥ (45) ಕೋಟೇಶ್ವರ ಅರಳಗುಡ್ಡೆ ಗಣೇಶ (32), ಮೂಡುಗೋಪಾಡಿ ನಾರಾಯಣ (55), ಶಂಕರನಾರಾಯಣ ಕುಪ್ಪಾರು ಉದಯ ಆಚಾರ (35), ಮೂಡ್ಲಕಟ್ಟೆ ಉಳ್ಳೂರು ಜಯಪ್ರಕಾಶ (49), ಅಂಕದಕಟ್ಟೆ ರಾಮಣ್ಣ ಶೆಟ್ಟಿ (55), ಮಾರ್ಕೋಡು ಹಾಡಿಮನೆ ಉದಯ ಕುಮಾರ್ ಶೆಟ್ಟಿ (42) ಆರೋಪಿಗಳು.

ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀ ಲಕ್ಷ್ಮೀ ಕ್ಲಬ್ನಲ್ಲಿ ಇಸ್ಪೀಟ್ ಆಡುತ್ತಿದ್ದ, ಸಿದ್ದಾರ್ಥ ಶೆಟ್ಟಿ, ಸಂತೋಷ ಕುಮಾರ್ ಶೆಟ್ಟಿ, ಹರೀಶ್ ಶೆಟ್ಟಿ, ರಮೇಶ್ ಕುಲಾಲ್, ವಿಲ್ಸ್ನ್, ಉದಯ ಭಂಡಾರಿ, ಹರೀಶ್ ತೋಳಾರ್, ಆನಂದ ಪೂಜಾರಿ, ಮಹಾಬಲ, ಮಂಜುನಾಥ, ಭುಜಂಗ ಶೆಟ್ಟಿ ಆರೋಪಿಗಳು.
ಸಿದ್ದಾಪುರ ಗ್ರಾಮ ದೊಟ್ಟಿನಬೇರು ಶಾಂತ ರಿಕ್ರಿಯೇಷನ್ ಕ್ಲಬ್ನಲ್ಲಿ ಜುಗಾರಿ ಆಡುತ್ತಿದ್ದ ಮಹೇಶ್ ಪೂಜಾರಿ, ಅನಿಲ ಕೆ. ಶೆಟ್ಟಿ, ಹಿರಿಯಣ್ಣ ಶೆಟ್ಟಿ, ಅವಿನಾಶ್, ನಾಗರಾಜ ಎನ್, ರಂಗಸ್ವಾಮಿ ಆರೋಪಿಗಳು.
ಬೈಂದೂರು ಯಡ್ತರೆ ಗ್ರಾಮದ ಎಂಜಿ ರಿಕ್ರಿಯೇಷನ್ ಕ್ಲಬ್ನಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಬೈಂದೂರು ಪ್ರಶಾಂತ (46), ಅರೆಹೊಳೆ ಸುರೇಶ (46), ಬಿಜೂರು ರಾಜೇಶ (36), ಭಟ್ಕಳ ರಾಜು ರಾಮ ನಾಯಕ್ (40), ಬಂಕೇಶ್ವರ ಗಣೇಶ (46), ಬಾಡಾ ಸತೀಶ (40), ಪಡುವರಿ ಜಯಂತ (35), ಗಂಟಿಹೊಳೆ ಬಿಜೂರು ವಿರೇಂದ್ರ ಶೆಟ್ಟಿ (50), ಬಂಕೇಶ್ವರ ಗೋಪಾಲ (47), ಮಯ್ಯಾರಿ ಸೂರ್ಕೂಂದ ರಾಘವೇಂದ್ರ (43), ತಾರಾಪತಿ ನಾರಾಯಣ ಖಾರ್ವಿ (55) ಎಂಬವರನ್ನು ವಶಕ್ಕೆ ಪಡೆದಿದ್ದಾರೆ. .
ಏಕಕಾಲದಲ್ಲಿ ಕಾರ್ಯಾಚರಣೆ…
ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸುರೇಶ್ ಜಿ.ನಾಯ್ಕ್ , ಕುಂದಾಪುರ ಎಸ್ಸೈ ಹರೀಶ್ ಆರ್. ನಾಯ್ಕ್, ಶಂಕರನಾರಾಯಣ ಎಸ್ಸೈ ಶ್ರೀಧರ ನಾಯ್ಕ್ ಸಿಬ್ಬಂದಿಗಳೊಂದಿಗೆ ಏಕಕಾಲದಲ್ಲಿ ಈ ದಾಳಿ ನಡೆಸಿದ್ದರು. ಬೈಂದೂರು, ಕುಂದಾಪುರ, ಶಂಕರನಾರಾಯಣ ಠಾಣೆಯಲ್ಲಿ ಪ್ರತ್ಯೇಕವಾಗಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.