ಕರಾವಳಿ

ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅಯ್ಕೆಯಾದ ರತ್ನಾಕರ ಕೊಠಾರಿಯವರಿಗೆ ಗೌರವ ಸಮ್ಮಾನ

Pinterest LinkedIn Tumblr

ಮಂಗಳೂರು ಫೆಬ್ರವರಿ 16 : ಕರ್ನಾಟಕ ಸರ್ಕಾರದ ನಾಗರಿಕ ಸೇವಾ ವೃಂದದಲ್ಲಿ ವಾಣಿಜ್ಯ ತೆರಿಗೆ ಇಲಾಖೆಗೆ ಅತ್ಯತ್ತಮ ಹಾಗೂ ಅನುಪಮ ಸೇವೆ ಸಲ್ಲಿಸಿರುವ ರತ್ನಾಕರ ಕೊಠಾರಿ ಇವರಿಗೆ 2020 ನೇ ಸಾಲಿನ ಗಣರಾಜ್ಯೋತ್ಸವದಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ-2020 ನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡಿ ಗೌರವಿಸಿದೆ.

ಈ ಪ್ರಯುಕ್ತ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು ಮೀರಾ ಸುರೇಶ್ ಪಂಡಿತ್ ಹಾಗೂ ಎಸ್.ಉದಯ ಶಂಕರ್ ಇತ್ತೀಚೆಗೆ ರತ್ನಾಕರ ಕೊಠಾರಿ ಅವರನ್ನು ಸನ್ಮಾನಿಸಿದ್ದಾರೆ ಎಂದು ವಾಣಿಜ್ಯ ತೆರಿಗೆ ಸಿ ಮತ್ತು ಡಿ ದರ್ಜೆ ನೌಕರರ ಸಂಘದ ಅಧ್ಯಕ್ಷರಾದ ಎಂ.ಶಶಿಧರ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಗಣೇಶ್ ರಾವ್ ಇವರ ಪ್ರಕಟಣೆ ತಿಳಿಸಿದೆ.

Comments are closed.