ಕರಾವಳಿ

ಅಧಿಕಾರಿಗಳಿಗೆ ಸಾರ್ವಜನಿಕರೇ ನೀಡಿದ ಜಮಾಬಂಧಿ ಶಾಕ್; ಗ್ರಾಪಂ ಪಿಡಿಒ ಕಾರ್‍ಯದರ್ಶಿಗಳು ಗೈರು!

Pinterest LinkedIn Tumblr

ಕುಂದಾಪುರ: ತಾಲೂಕು ಪಂಚಾಯಿತಿ ಹಿಂದಿನ ಇಒ 86 ಸಾವಿರ ಮನೆ ಬಾಡಿಗೆ ಉಳಿಸಿಕೊಂಡಿದ್ದರೂ ವಸೂಲಿಗೆ ಮಾಡಿಲ್ಲ ಏಕೆ? ಜಮಾಬಂಧಿ ಸಭೆ ನಡೆಸುವ ಬಗ್ಗೆ ಮಾಹಿತಿ ನೀಡದೆ ಗೌಪ್ಯವಾಗಿ ನಡೆಸುವ ಉದ್ದೇಶ ಏನು? ಕಳೆದ  13 ವರ್ಷದಿಂದ ಜಮಾಬಂದಿ ನಡೆಸದೇ ಇರುವುದಕ್ಕೆ ಕಾರಣ ಏನು?. ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ. ಕಾಟಾಚಾರಕ್ಕೆ ಜಮಾಬಂದಿ ನಡೆಸುವುದು ಸರಿಯಲ್ಲ. ಅಧಿಕಾರಿಗಳ ಶಾಸಕಾಂಗದ ದಾರಿ ತಪ್ಪಿಸುತ್ತಿದ್ದಾರೆ..ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ತಾಪಂ ಜಮಾಬಂಧಿ ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ಮುಟ್ಟಿಸದ ಬಿಸಿಯಿದು..

ತಲ್ಲೂರು ಗ್ರಾಮ ಪಂಚಾಯಿತಿ ಸದಸ್ಯ ಉದಯ ಕುಮಾರ್ ತಲ್ಲೂರು ಮಾತನಾಡಿ, ಜಮಾಬಂಧಿ ಕೇವಲ ಸ್ವಾಗತ, ವಂದನಗೆ ಸೀಮಿತವಾಗಬಾರದು. ತಾಲೂಕು ಪಂಚಾಯಿತಿ ಆಡಳಿತ, ಹಣಕಾಸು, ಖರ್ಚುವೆಚ್ಚಗಳ ಸಾರ್ವಜನಿಕರ ಮುಂದಿಡುವ ಉದ್ದೇಶದಲ್ಲಿ ಜಮಾಬಂದಿ ನಡೆಸಲಾಗುತ್ತಿದ್ದು, ಪ್ರೊಸೀಜರ್ ಪ್ರಕಾರ ನಡೆಸದೆ ಕಾಟಾಚಾರಕ್ಕೆ ಸಭೆ ಆಯೋಜಿಸಿದಂತೆ ಕಾಣುತ್ತಿದೆ. ಕಳೆದ 13 ವರ್ಷದಿಂದ ತಾಪಂ ಜಮಾಬಂಧಿ ನಡೆಸದ ಜನರ ಕತ್ತಲಲ್ಲಿಟ್ಟದೆ. ತಾಪಂ ನಿರ್ವಹಣೆಯ ಕ್ವಾಟ್ರಸ್‌ಗಳ ಬಾಡಿಗೆ ಇಒ 86 ಸಾವಿರ ಉಳಿಸಕೊಂಡಿರುವುದು ಅಚ್ಚರಿ. ಬಾಡಿಗೆ ವಸೂಲಿಗೆ ಏನುಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.ಇದಕ್ಕೆ ಪೂರಕವಾಗಿ ಮಾತನಾಡಿದ ಚಂದ್ರಮ ತಲ್ಲೂರು, ಇಒ ಮನೆಬಾಡಿಗೆ 86 ಸಾವಿರ ಅವರ ಸಂಬಳದಲ್ಲಿ ಕಟ್ ಮಾಡಿ ವಸೂಲಿ ಮಾಡಬೇಕು. ತಾಪಂ ಕ್ಷಾಟ್ರಸ್ ಎಷ್ಟಿದೆ ಎಷ್ಟು ಮನೆಯಲ್ಲಿ ಬಾಡಿಗೆ ಇದ್ದಾರೆ. ಯಾರೆಲ್ಲಾ ಬಾಡಿಗೆ ಉಳಿಸಿಕೊಂಡಿದ್ದಾರೆ ಎಂಬ ಲೆಕ್ಕ ಕೇಳಿದರು.

ಹಿಂದೆ ಜಮಾಬಂದಿ ಏಕೆ ನಡೆದಿಲ್ಲ ಎನ್ನುವ ಮಾಹಿತಿ ಇಲ್ಲ. ಮುಂದೆ ವರ್ಷಕ್ಕೊಮ್ಮೆ ಕ್ರಮಬದ್ಧವಾಗಿ ಜಮಾಬಂಧಿ ನಡೆಸಲಾಗುತ್ತದೆ. ಜಮಾಬಂದಿಯಲ್ಲಿ ಕೇವಲ ಪರಿಶೀಲನೆ ಅಷ್ಟೇ ಅಲ್ಲದೆ ಧನಾತ್ಮಕ ಹಾಗೂ ಋಣಾತ್ಮಕ ವಿಷಯಕ್ಕೂ ಆಧ್ಯತೆ ನೀಡಲಾಗುತ್ತದೆ ಎಂದು ಹೇಳಿದ ಯೋಹನಾ ಆಯೋಗ ನಿರ್ದೇಶಕ ಗುರುದತ್ ಕ್ವಾಟ್ರಸ್‌ಗಳ ಬಗ್ಗೆ ಮಾಹಿತಿ ನೀಡುವಂತೆ ತಾಪಂ ಮೆನೇಜರಿಗೆ ಸೂಚಿಸಿದರು.

ತಾಪಂ ತೆಕ್ಕೆಯಲ್ಲಿ ಒಟ್ಟು 11 ಮನೆಗಳಿದ್ದು, ಅದರಲ್ಲಿ ಎರಡು ಮನೆ ಶೀಥಿಲವಾಗಿದೆ. ಒಂದು ಮನೆ ಖಾಲಿಯುದ್ದು, ಉಳಿದ ಮನೆಯಲ್ಲಿ ಬಾಡಿಗೆದಾರರು ಇದ್ದಾರೆ. ತಾಪಂ ಇಒ ಬಾಡಿಗೆ ಬಾಕಿ ವಸೂಲಿಗೆ ಕ್ರಮ ತಗೆದುಕೊಳ್ಳಳಾಗುತ್ತದೆ ಎಂಬ ಮಾಹಿತಿ ಮೆನೇಜರ್ ನೀಡಿದರು.
ತಾಪಂ ವರಮಾನದ ಮೂಲವಾದ ಅಂಗಡಿ ಕೋಣೆಗಳ ರೋಸ್ಟರ್ ಪದ್ದತಿಯಲ್ಲಿ ಬಾಡಿಗೆ ಕೊಡದೆ, ಒಳ ವ್ಯವಹಾರದಲ್ಲಿ ಬಾಡಿಗೆ ಇದ್ದವರಿಗೆ ಮತ್ತೆ ನೀಡಲಾಗುತ್ತದೆ. ಎಸ್ಸಿಎಸ್ಟಿ ಮೀಸಲು ಕೊಡಬೇಕು ಎನ್ನುವ ನಿಯಮ ಹಾಗೂ ರೋಸ್ಟರ್ ಪದ್ದತಿ ಕ್ರಮ ಅನುಸರಿಸುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಗುರುದತ್, ನಿಯಮದ ಪ್ರಕಾರ ಅಂಗಡಿ ಕೋಣೆ ಏಲಂ ಮಾಡುವಂತೆ ಸೂಚಿಸಿದರು.

ಕೃಷಿ ಇಲಾಖೆ ಅಧಿಕಾರಿಗಳು ಜಮಾಬಂಧಿಯಲ್ಲಿ ಪಾಲ್ಗೊಳ್ಳದ ಬಗ್ಗೆ ಸಾರ್ವಜನಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಕರೆ ಮಾಡಿ ಸಭೆಗೆ ಬರವಂತೆ ಸೂಚಿಸಿದರೂ ಅಧಿಕಾರಿ ಬಾರದೆ ಮತ್ತೊಬ್ಬರ ಕಳುಹಿಸಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಯಿತು. ಜಲಾನಯನ ಅಧಿಕಾರಿಯೇ ಕಿಂಡಿ ಆನೆಕಟ್ಟು ನಿರ್ಮಾಣ ಗುತ್ತಿಗೆ ಮಾಡುವ ಜೊತೆ ಬಡ್ಡಿ ವ್ಯವಹಾರ ಮಾಡುತ್ತಾರೆ. ಜಲಾನಯನ ಹಾಗೂ ಅಂಗನವಾಡಿ ಅನುದಾನದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಯಿತು.

ಸ್ಪರ್ಷರು ಕೂಡಾ ಬೋಗಸ್ ಎಸ್ಸಿಎಸ್ಟಿ ಸರ್ಟಿಫಿಕೇಟ್ ಪಡೆದು ಎಸ್ಸಿಎಸ್ಟಿ ಜನರಿಗೆ ಅನ್ಯಾಯ, ಗ್ರಾಪಂ ಪಿಡಿಒ, ಕಾರ್‍ಯದರ್ಶಿಳ ಭರ್ತಿ, ಗ್ರಾಪಂ ಪಿಡಿಒ ಅನಾವಶ್ಯಕ ಕಚೇರಿಯಿಂದ ಹೊರಗುಳಿಯುವುದಲ್ಲದೆ ಇನ್ನಿತರ ವಿಷಯಗಳ ಬಗ್ಗೆ ಸಭೆಯ ಗಮನ ಸೆಳೆಯಲಾಯಿತು.ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಪಂ ಯೋಜನಾ ಆಯೋಗ ನಿರ್ದೇಶಕ ಗುರುದತ್, ತಾಪಂ ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಬಿ.ಪೈ, ಇಒ ಕೇಶವ ಶೆಟ್ಟಿಗಾರ್ ಇದ್ದರು.

ಕುಂದಾಪುರ ವಲಯ ಶಿಕ್ಷಣ ಇಲಾಖೆ ಕೇಸ್ ವರ್ಕರ್ ಶಿಕ್ಷಕರ ವೇತನ ಹಾಗೂ ಶಿಕ್ಷಣ ಸಾಮಗ್ರಿಗಳಿಗಾಗಿ ಬಂದ ಹಣ ವೈಯಕ್ತಿಕ ಖಾತೆಗೆ ಹಾಕಿಕೊಂಡು ಹಣ ದುರುಪಯೋಗ ಮಾಡಿದ್ದು, ಸಾಬೀತಾಗಿದೆ. ಹಣಕಾಸಿನ ಆರೋಪ ಇರುವುದರಿಂದ ಅವರ ತಕ್ಷಣ ಅಮಾನತು ಮಾಡಬೇಕು. ತಾಪಂ ಜಮಾಬಂಧಿಯಲ್ಲಿ ನಿರ್ಣಯ ತೆಗೆದುಕೊಂಡು ಅವರ ವಿರುದ್ಧ ಕ್ರಮಕ್ಕೆ ಶಿಕ್ಷಣ ಇಲಾಖೆಗೆ ನಿರ್ಣಯ ಕಾಫಿ ಕಳಹಿಸಬೇಕು. ಕೇಸ್ ವರ್ಕರ ವೈಯಕ್ತಿಕ ಖಾತೆ ಮೂಲಕ ಹಣದ ದುರುಪಯೋಗ ಆಗಿರುವುದು ಸಾಬೀತಾಗಿದ್ದು, ವರ್ಷಕ್ಕೆ 3 ಸಾವಿರದಂತೆ ಕಳೆದ 10ವರ್ಷದಲ್ಲಿ 30ಲಕ್ಷ ಸರ್ಕಾರ ಹಣ ದರ್ಬಳಕೆ ಮಾಡಿಕೊಂಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಅಂಗನವಾಡಿ ಕಟ್ಟಡ ದುರಸ್ತಿ ಅನುದಾನ ಬಳಕೆ ಬಗ್ಗೆ ತನಿಖೆ ನಡೆಸಬೇಕು.
-ಉದಯ ಕುಮಾರ್ ತಲ್ಲೂರು, ಸದಸ್ಯ ಗ್ರಾಮ ಪಂಚಾಯಿತಿ ತಲ್ಲೂರು.

ಸದಸ್ಯರು ಹಾಗೂ ಸಾರ್ವಜನಿಕರು ಮಾಡಿದ ಆಕ್ಷೇಪದ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವರದಿ ತಾಲೂಕು ಪಂಚಾಯಿತಿ ಕಡ್ಡಾಯವಾಗಿ ಸಲ್ಲಿಸಬೇಕು. ಜಮಾಬಂದಿ ಪ್ರತೀವರ್ಷ ನಡೆಯಬೇಕಾಗಿದ್ದು, ನಾನು ಜಿಲ್ಲೆಗೆ ಬಂದು ಮೂರು ತಿಂಗಳಾಗಿದ್ದು, ಕಳೆದ ೧೩ ವರ್ಷದಿಂದ ಏಕೆ ಜಮಾಬಂದಿ ನಡೆದಿಲ್ಲ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಜಮಾಬಂದಿ ಸಭೆಗೆ ಕೋರಮ್ ಅವಶ್ಯವಿಲ್ಲ. ಕಳೆದ ಮೂರು ದಿನದಿಂದ ತಾಪಂ ಜಮಾಬಂದಿ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸಾರ್ವಜನಿಕರ ಆಕ್ಷೇಪವಿದ್ದರೆ ಮಂಡಿಸಬಹುದು. ಆಕ್ಷೇಪಗಳ ಪಟ್ಟಿಕೊಂಡಿದ್ದು, ವರದಿ ಸಲ್ಲಿಸಲಾಗುತ್ತದೆ. ಆಪ್ಷೇಪಗಳಿಗೆ ಅಧಿಕಾರಿಗಳ ವರದಿ ತಕ್ಷಣ ತಾಪಂಗೆ ಸಲ್ಲಿಸಬೇಕು.
-ಗುರುದತ್, ಯೋಜನಾ ನಿರ್ದೇಶಕ ಜಿಪಂ ಉಡುಪಿ.

Comments are closed.