ಕರಾವಳಿ

ಬೈಂದೂರು ಖಂಬದಕೋಣೆಯ ಹೊಳೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕಿನ ಖಂಬದಕೋಣೆ ಗ್ರಾಮದ ಎಡಮಾವಿನಹೊಳೆ ಬೊಬ್ಬರ್ಯ ಗುಂಡಿ ಹೊಳೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿದ್ದು ಅವರ ಹುಡುಕಾಟಕ್ಕೆ ವ್ಯಾಪಕ ಕಾರ್ಯಾಚರಣೆ ನಡೆಯುತ್ತಿದೆ. ಅ.17 ಗುರುವಾರ ಮಧ್ಯಾಹ್ನದ ಬಳಿಕ ಈ ಅವಘಡ ನಡೆದಿದೆ.

(ರಿತೇಶ್ ಶೆಟ್ಟಿ, ವಂಶಿತ್ ಶೆಟ್ಟಿ)

ಖಂಬದಕೋಣೆ ದೊಡ್ಮನೆ ಹಳೆಗೇರಿ ನಿವಾಸಿ ವಂಶಿತ್ ಶೆಟ್ಟಿ (12), ಹಳಗೇರಿ ಪಟೇಲರಮನೆ ನಿವಾಸಿ ರಿತೇಶ್ ಶೆಟ್ಟಿ (12) ನೀರುಪಾಲಾದ ದುರ್ದೈವಿ ಬಾಲಕರು.

 

ಘಟನೆ ವಿವರ: ಬೈಂದೂರು ಸಮೀಪದ ಖಂಬದಕೋಣೆ ನಿವಾಸಿಗಳಾದ ಇಬ್ಬರು ಯುವಕರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಶಾಲೆ ರಜೆಯಿದ್ದ ಹಿನ್ನೆಲೆ ಹೊಳೆ ಸಮೀಪದಲ್ಲಿ ಆಟವಾಡಲು ಗೆಳೆಯರೊಂದಿಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾಲು ತೊಳೆಯಲು ನೀರಿಗಿಳಿದಿದ್ದು ಕಾಲುಜಾರಿ ನದಿಯಲ್ಲಿ ಮುಳುಗಿದ್ದಾನೆ. ಈ ವೇಳೆ ಆತನ ರಕ್ಷಣೆಗಿಳಿದ ಇನ್ನೊಬ್ಬನು ಕೂಡ ನೀರುಪಾಲಾಗಿರುವ ಶಂಕೆಯನ್ನು ಸ್ಥಲೀಯರು ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಭೇಟಿ ನೀಡಿದ್ದಾರೆ.

ಸ್ಥಳಕ್ಕೆ ಬೈಂದೂರು ಪೊಲೀಸರು, ಕುಂದಾಪುರ ಅಗ್ನಿಶಾಮಕದಳ ಸಿಬ್ಬಂದಿಗಳು ಭೇಟಿ ನೀಡಿದ್ದು ಮುಳುಗು ತಜ್ನರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಇಬ್ಬರು ಬಾಲಕರ ಶೋಧದಲ್ಲಿ ತೊಡಗಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.