ಮಂಗಳೂರು : ಸುಮಾರು 717 ವರ್ಷಗಳ ನಂತರ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಯಾದವ ಸಮಾಜದ ಆರಾಧನಾ ದೈವ ಕಲ್ಲ್ಯೊಟ್ ಭಗವತಿ ದೇವಿಯ ಪೇರುಂ ಕಳಿಯಾಟ ಇದೇ ವರ್ಷ ಡಿಸೆಂಬರ್ 23 ರರಿಂದ 29 ರವರೆಗೆ ಕಾಸರಗೋಡಿನ ಪೆರಿಯದ ಹತ್ತಿರದ ಕಳ್ಯೊಟ್ ನಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರವನ್ನು ಕೊಲ್ಯ ಶ್ರಿ ಮೂಕಾಂಬಿಕ ದೇವಸ್ತಾನದ ಟ್ರಸ್ಟೀ ಶ್ರೀಯುತ ಮಧುಸೂದನ ಆಯರ್ ಬಿಡುಗಡೆಗೊಳಿಸಿದರು.
ಯಾದವ ಸಭಾ ಮಂಗಳೂರು ತಾಲ್ಲೂಕ್ ಅಧ್ಯಕ್ಷರಾದ ಸದಾನಂದ ಕಾವೂರು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ರಾಜಶೇಖರ್ ಗೋರಿಗುಡ್ಡ, ಸುಳ್ಯದ ಶ್ರೀಯುತ ಸುಧಾಮ ಆಲೆಟ್ಟಿ, ಜನಾರ್ಧನ್ ಕನಕೂರ್, ಸದಾನಂದ ಕುರಿಂಜಿ ಯತೀಶ್ ಅಡ್ಯನಡ್ಕ ಉಪಸ್ಥಿತ ರಿದ್ದರು.
Comments are closed.