ಕರಾವಳಿ

ದೇವಸ್ಥಾನದ ಕೆರೆಯಲ್ಲಿ ಸ್ನಾನ ಮಾಡುವಾಗ ಮುಳುಗಿ ದೇಹದಾರ್ಢ್ಯ ಪಟು ಸಾವು

Pinterest LinkedIn Tumblr

ಕುಂದಾಪುರ: ದೇವಸ್ಥಾನದ ಕೆರೆಗೆ ಸ್ನಾನಕ್ಕೆ ತೆರಳಿದ್ದ ಯುವಕನೋರ್ವ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳಿಗಿ ಸಾವಿಗೀಡಾದ ಘಟನೆ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಪುಷ್ಕರಣಿಯಲ್ಲಿ ಸೋಮವಾರ‌ ನಡೆದಿದೆ. ಯುವಕನನ್ನು ಕಾರ್ಕಡ ನಿವಾಸಿ ವಿನೋದ್ ಗಾಣಿಗ(28) ಎಂದು ಗುರುತಿಸಲಾಗಿದೆ.

ನಾಗರಪಂಚಮಿಯ ದಿನವಾದ ಸೋಮವಾರ ಕೆಲಸಕ್ಕೆ ರಜೆಯಿದ್ದ ಕಾರಣ ವಿನೋದ್ ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದ ಪುಷ್ಕರಣಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಇದೇ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದು ಈಜಲು ತಿಳಿಯದಿದ್ದ ಹಿನ್ನೆಲೆ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ಜು ಮೇಲಕ್ಕೆತ್ತಿದ್ದಾರೆ. ಮೃತ ವಿನೋದ್ ದೇಹದಾರ್ಡ್ಯ ಪಟುವಾಗಿದ್ದು ಪೈಟಿಂಗ್ ಕೆಲಸ ಮಾಡುತ್ತಿದ್ದರು.

ಈ ಬಗ್ಗೆ ಕೋಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

Comments are closed.