ಬೆಂಗಳೂರು: ವಿಶ್ವಾಸಮತಯಾಚನೆಯಲ್ಲಿ ಮೈತ್ರಿ ಸರಕಾರ ಬಹುಮತ ಕಳೆದುಕೊಂಡಿದ್ದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ರಾಜಿನಾಮೆ ನೀಡಬೇಕೆಂಬ ಬಿಜೆಪಿಯ ಹೋರಾಟಕ್ಕೆ ಜಯಸಿಕ್ಕಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಟ್ವೀಟ್ ಮಾಡಿದ್ದಾರೆ.
ಮುಂದೆ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಅಧಿಕಾರ ಸೂತ್ರ ಹಿಡಿಯಲಿದೆ. ಸರ್ವವ್ಯಾಪಿ ಸರ್ವಸ್ಪರ್ಶಿ ಆಡಳಿತ ನೀಡುವುದೇ ಬಿಜೆಪಿ ಗುರಿ ಎಂದು ಟ್ವೀಟ್ ಮೂಲಕ ಕೋಟ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ.
ಕೆಲವಾರು ತಿಂಗಳುಗಳಿಂದ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿರುವ ಕೋಟ ಮೈತ್ರಿ ಸರಕಾರದ ವೈಫಲ್ಯತೆ ಬಗ್ಗೆ ತನ್ನದೇ ಆದ ಶೈಲಿಯಲ್ಲಿ ಕುಟುಕುತ್ತಿದ್ದರು.
ಬಹುಮತ ಕಳೆದುಕೊಂಡ ಮೈತ್ರಿ ಸರ್ಕಾರ ರಾಜೀನಾಮೆ ನೀಡಬೇಕೆಂಬ ನಮ್ಮ ಹೋರಾಟಕ್ಕೆ ಜಯ ದೊರಕಿದೆ.#ಮುಂದೆ_ಯಡಿಯೂರಪ್ಪನವರ_ನೇತೃತ್ವದ ಸರ್ಕಾರ ಅಧಿಕಾರ ಸೂತ್ರ ಹಿಡಿಯಲಿದೆ. "ಸರ್ವವ್ಯಾಪಿ – ಸರ್ವಸ್ಪರ್ಶಿ ಆಡಳಿತ ನೀಡುವುದೇ ಬಿಜೆಪಿ ಗುರಿ."@BSYBJP @BJP4Karnataka pic.twitter.com/L77aMky531
— Kota Shrinivas Poojari (@KotasBJP) July 23, 2019
Comments are closed.