ಉಡುಪಿ: ಇತ್ತೀಚೆಗಷ್ಟೇ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ಪ್ರಸ್ತುತ ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಕೆ.ಅಣ್ಣಾಮಲೈ ಅವರು ಶಬರಿಮಲೆಗೆ ತೆರಳಿ ಶ್ರೀ ಮಣಿಕಂಠನ ದರ್ಶನ ಪಡೆದಿದ್ದಾರೆ.
ಅಣ್ಣಾಮಲೈ ಅವರು ಖಾಕಿ ಕಳಚಿಟ್ಟು ಸದ್ಯ ಶಬರಿಮಲೆಯ ಸಂಪ್ರದಾಯದಂತೆ ಕಪ್ಪು ಬಟ್ಟೆ ಧರಿಸಿ 18 ಮೆಟ್ಟಿಲೇರಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದಾರೆ. ಕಪ್ಪು ಲುಂಗಿ, ಹೆಗಲಿಗೊಂದು ಕಪ್ಪು ಶಾಲು, ಬ್ಯಾಗ್ ಹಾಕಿ ಬರಿಗಾಲಲ್ಲಿ ಶಬರಿಮಲೆ ಬೆಟ್ಟ ಏರಿದರು.
ಶಬರಿಮಲೆಗೆ ಬಂದಿದ್ದ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಭಕ್ತರು ಅಣ್ಣಾಮಲೈ ಅವರನ್ನು ಕಂಡು ಮಾತನಾಡಿಸಿ, ಕುಶಲೋಪರಿ ವಿಚಾರಿಸಿದ್ದು ಮಾತ್ರವಲ್ಲದೇ ಸೆಲ್ಫಿ ತೆಗಿಸಿಕೊಂಡು ಖುಷಿಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅಣ್ಣಾಮಲೈ, ಬಹಳ ಸಮಯದಿಂದ ಶಬರಿಮಲೆಗೆ ಬರುವ ಸಂಕಲ್ಪ ಮಾಡಿದ್ದೆ. ಕೆಲಸದ ಒತ್ತಡದಿಂದ ಸಾಧ್ಯವಾಗಿರಲಿಲ್ಲ. ಮುಂದೇನು ಅಂತ ಮುಂದೆ ಹೇಳ್ತೇನೆ. ಸದ್ಯ ದೇವರ ದರ್ಶನ ಮಾಡಿದ್ದೇನೆ ಎಂದು ಹೇಳಿದರು.
Comments are closed.