ಕರಾವಳಿ

ಸಿದ್ದಾಪುರದ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಜಯ ಕರ್ನಾಟಕದಿಂದ ಉಚಿತ ನೋಟ್ ಬುಕ್ ವಿತರಣೆ

Pinterest LinkedIn Tumblr

ಕುಂದಾಪುರ: ಸದಾ ಕ್ರಿಯಾಶೀಲ ಚಟುವಟಿಕೆ ಮಾಡುತ್ತಲಿರುವ ಜಯಕರ್ನಾಟಕ ಸಂಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿನ ಸರಕಾರಿ ಹಿರಿಯ ಪ್ರಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕವನ್ನು ಸಿದ್ಧಾಪುರ ಘಟಕದ ವತಿಯಿಂದ ಗುರುವಾರ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ವಹಿಸಿದ್ದರು. ಜಿಲ್ಲಾ ಗೌರವ ಸಲಹೆಗಾರ ಬಾರಕೂರು ಸುಧಾಕರ್ ರಾವ್, ಕಾರ್ಯಧಕ್ಷ ಶರತ್ ಶೆಟ್ಟಿ, ಹೋರಾಟ ಸಮಿತಿಯ ಅಧ್ಯಕ್ಷ ಕರುಣಾಕರ ಪೂಜಾರಿ, ಜಿಲ್ಲಾಸಮಿತಿಯ ರಾಧಾಕೃಷ್ಣ, ಸಿದ್ಧಾಪುರ ಘಟಕದ ಅಧ್ಯಕ್ಷ ರಾಘವೇಂದ್ರ ಸಿದ್ದಾಪುರ ಮಹಿಳಾ ಉಪಾಧ್ಯಕ್ಷರು ವೀಣಾ ಮತ್ತು ಹಲವು ಪಧಾದಿಕಾರಿಗಳು ಉಪಸ್ಠಿತರಿದ್ದರು. ಶಾಲ ಮುಖ್ಯೋಪಧ್ಯಾಯರು ಮತ್ತು ಅಧ್ಯಾಪಕ ವೃಂದ ಸಹಕರಿಸಿದರು.

Comments are closed.