ಕರಾವಳಿ

ಬಾಘಮಂಡಲದಲ್ಲಿ ಕಾಶೀಮಠಾಧೀಶರಿಂದ ತ್ರಿವೇಣಿ ಸಂಗಮ ಸ್ನಾನ

Pinterest LinkedIn Tumblr

ಮಂಗಳೂರು : ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಆದಿತ್ಯವಾರ ಪವಿತ್ರ ನದಿ ಕಾವೇರಿ ಯ ಉಗಮಸ್ಥಾನವಾದ ತಲಕಾವೇರಿಯ ಬಾಘಮಂಡಲ ಕ್ಷೇತ್ರದ ತ್ರಿವೇಣಿ ಸಂಘಮದಲ್ಲಿ ಪುಣ್ಯ ಸ್ನಾನ ನೆರವೇರಿಸಿದರು . ಶ್ರೀಗಳವರ ವಸಂತಮಾಸಾಚರಣೆಯ ಕೊನೆಯ ದಿನವಾದ ಇಂದು ಪವಿತ್ರ ಸ್ನಾನದ ಬಳಿಕ ನೆರೆದ ಸಮಾಜ ಭಾಂಧವರಿಗೆ ತಪ್ತ ಮುದ್ರಾಧಾರಣೆ ಶ್ರೀಗಳವರ ಅಮೃತ ಹಸ್ತಗಳಿಂದ ನಡೆಯಿತು.

ಸಾಯಂಕಾಲ ಭವ್ಯ ವೇದಿಕೆಯಲ್ಲಿ ಶ್ರೀಗಳವರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಡಾ . ಜಗನ್ನಾಥ್ ಶೆಣೈ ಮೈಸೂರ್ ಪದಾಧಿಕಾರಿಗಳಾದ ಪಿ ರಘುವೀರ್ ಭಂಡಾರ್ಕರ್ , ಜಿ ಜಿ ಶೆಣೈ, ಗುರುಪ್ರಸಾದ್ ಕಾಮತ್, ದಿನೇಶ್ ಕಾಮತ್ ಕೋಟೇಶ್ವರ , ಸುಧಾಕರ್ ಶೆಣೈ, ಗಜಾನನ ಕಾಮತ್, ರಾಮ್ನಾಥ್ ಶೆಣೈಹಾಗು ನೂರಾರು ಸಮಾಜ ಭಾಂದವರು ಉಪಸ್ಥಿತರಿದ್ದರು.

Comments are closed.